ಸವಣೂರು : ರಾಜ್ಯಮಟ್ಟದ ಮಾಸ್ಟರ್‌ ಅಥ್ಲೆಟಿಕ್ಸ್‌ ನಲ್ಲಿ ಬಹುಮಾನ ಪಡೆದ ಪುಷ್ಪಾವತಿ ಕೇಕುಡೆ ಅವರಿಗೆ ಅಭಿನಂದನೆ

0

ಸವಣೂರು : ಕೋಲಾರದಲ್ಲಿ ಜರುಗಿದ ರಾಜ್ಯಮಟ್ಟದ 41ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಫ್ ನಲ್ಲಿ 800 ಮೀಟರ್ ಓಟ, ಡಿಸ್ಕಸ್ ತ್ರೋ, ಜಾವಲಿಂಗ್ ಹಾಗೂ ರಿಲೇ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸವಣೂರಿನ ಪುಷ್ಪಾವತಿ ಕೇಕುಡೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.

ಅವರನ್ನು ಸವಣೂರು ಆದರ್ಶ ಸ್ತ್ರೀ ಶಕ್ತಿ ಗೊಂಚಲು ಸಭೆಯಲ್ಲಿ ಆದರ್ಶ ಸ್ತ್ರೀಶಕ್ತಿ ಗೊಂಚಲಿನ ಕಾರ್ಯದರ್ಶಿಯೂ ಆಗಿರುವ ಪುಷ್ಪಾವತಿ  ಕೇಕುಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸವಣೂರು ಗ್ರಾಮದ ವಿವಿಧ ಅಂಗನವಾಡಿಗಳ ಕಾರ್ಯಕರ್ತೆಯರಾದ ಮಮತಾ ಆರೇಲ್ತಡಿ,ಸ್ಪೂರ್ತಿ ಮಾಂತೂರು, ಸ್ವಾತಿಪ್ರಿಯ ಸವಣೂರು, ಕಾವ್ಯ ಪೆರಿಯಡ್ಕ,ಸೌಮ್ಯ ಪಣೆಮಜಲು ಮತ್ತು ಆದರ್ಶ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷ ಸದಸ್ಯರೆಲ್ಲರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here