ಕಾವು ಧಾರ್ಮಿಕ ಶಿಕ್ಷಣ ಕೇಂದ್ರದ ಬೋಧಕ ವೃಂದಕ್ಕೆ ದೇವಸ್ಥಾನದ ಜಾತ್ರೋತ್ಸವದಲ್ಲಿ ಗೌರವಾರ್ಪಣೆ

0

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಬೋಧಕ ವೃಂದಕ್ಕೆ ಶ್ರೀದೇವರ ವರ್ಷಾವಧಿಯ ಜಾತ್ರೋತ್ಸವದ ಸುಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಧಾರ್ಮಿಕ ಶಿಕ್ಷಣ ಕೇಂದ್ರದ ಬೋಧಕರಾದ ಲಲಿತಾ ಚಾಕೋಟೆ, ಗೋಪಾಲಕೃಷ್ಣ ಭಟ್ ಕಮಲಡ್ಕ, ವೆಂಕಟೇಶ್ ಪ್ರಸಾದ್ ಕುರಿಂಜ, ಹರಿಪ್ರಸಾದ್ ಸುಳ್ಯ, ವೀರಪ್ಪ ಗೌಡ ದುಗ್ಗಳ, ತಿಮ್ಮಪ್ಪ ಮಾಲೆತ್ತೋಡಿ, ಹೇಮಲತಾ ಕಜೆಗದ್ದೆ, ದೀಪಕ್ ಕುಲಾಲ್ ಅಕಾಯಿರವರಿಗೆ ಶ್ರೀದೇವರ ಮುಂಭಾಗದಲ್ಲಿ ಶಾಲು ಹಾಕಿ, ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಧಾರ್ಮಿಕ ಶಿಕ್ಷಣ ಕೇಂದ್ರದ ಸಂಯೋಜಕ ಭಾಸ್ಕರ ಬಲ್ಯಾಯ, ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here