ನಿಡ್ಪಳ್ಳಿ: ಜೂಜಾಟ ಅಡ್ಡೆಗೆ ದಾಳಿ – 6 ಮಂದಿಯ ಬಂಧನ, ನಗದು, ಮೊಬೈಲ್ ವಶಕ್ಕೆ

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ತಂಬುತಡ್ಕ ಎಂಬಲ್ಲಿ ಜೂಜಾಟ ಅಡ್ಡೆಗೆ ಮಾ.28ರ ರಾತ್ರಿ ದಾಳಿ ನಡೆಸಿದ ಸಂಪ್ಯ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ನಗದು ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಬಂಟ್ವಾಳ ಅನಂತಾಡಿ ಗ್ರಾಮದ ನಾರಾಯಣ ಗೌಡ ಎಂಬವರ ಪುತ್ರ ಲೋಕೇಶ್ ಗೌಡ(40ವ), ಆರ್ಲಪದವು ಭರಣ್ಯ ನಿವಾಸಿ ಬಾಬು ಎಂಬವರ ಪುತ್ರ ಹೇಮನಾಥ ಬಿ(33ವ), ಕೌಡಿಚ್ಚಾರು ಗ್ರಾಮದ ಮೋನಪ್ಪ ಎಂಬವರ ಪುತ್ರ ಸಂತೋಷ(40ವ), ದರ್ಬೆತ್ತಡ್ಕ ಕುರಿಂಜ ನಾರಾಯಣ ಎಂಬವರ ಪುತ್ರ ಸದಾನಂದ(49ವ), ನಿಡ್ಪಳ್ಳಿ ಗೋಲಿತ್ತಡಿನಿವಾಸಿ ಕುಗ್ಗು ಎಂಬವರ ಪುತ್ರ ಉಮೇಶ್(33ವ), ಸಾಲೆತ್ತೂರು, ಸುಂದರ ಶೆಟ್ಟಿ ಎಂಬವರ ಪುತ್ರ ಸತೀಶ(45ವ) ಎಂಬವರು ಬಂಧಿತ ಆರೋಪಿಗಳು.

ಆರೋಪಿಗಳು ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ಎಂಬಲ್ಲಿ ಅಕ್ರಮವಾಗಿ ಹಣವಿಟ್ಟು ಜೂಜಾಟ ಆಡುತ್ತಿದ್ದರು. ಮಾಹಿತಿ ಪಡೆದ ಸಂಪ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಜೂಜಾಟಕ್ಕೆ ಸೊತ್ತುಗಳನ್ನು ವಶಕ್ಕೆ ಪಡೆದು ರೂ. 35,710 ನಗದು ರೂ ಮತ್ತು 6 ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಘಟನೆ ಕುರಿತು ಸಂಪ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here