ಕೃಷಿ ರಕ್ಷಣೆಯ ಬಂದೂಕು ಠಾಣೆಯಲ್ಲಿಡಲು ವಿನಾಯಿತಿಗೆ ಒತ್ತಾಯ

0

ಪುತ್ತೂರು: ಚುನಾವಣೆ ಘೋಷಣೆಯಾದ ಬಳಿಕ ಕೃಷಿ ರಕ್ಷಣೆಗೆಂದು ನೀಡಿದ್ದ ಬಂದೂಕುಗಳನ್ನು ಠಾಣೆಯಲ್ಲಿಡಲು ಪೊಲೀಸ್ ಠಾಣೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಈ ಕುರಿತು ವಿನಾಯಿತಿ ನೀಡಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಸಮೀಪದ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳಲ್ಲಿ ಕೃಷಿಕರು ಬಂದೂಕುಗಳನ್ನು ಠಾಣೆಯಲ್ಲಿಡಲು ವಿನಾಯತಿ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೃಷಿ ರಕ್ಷಣೆಗೆ ನೀಡಿದ್ದ ಬಂದೂಕುಗಳನ್ನು ಚುನಾವಣೆಯ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿಲ್ಲಾಡಳಿತವನ್ನು ಈ ಮೂಲಕ ಒತ್ತಾಯಿಸುತ್ತದೆ.

LEAVE A REPLY

Please enter your comment!
Please enter your name here