ಎ.1: ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ

0


ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಎ.1 ರಂದು ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ ನಡೆಯಲಿದೆ.


ಎ.1ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಬ್ರಹ್ಮದೇವರ ತಂಬಿಲ, ರಾತ್ರಿ ಅನ್ನಸಂತರ್ಪಣೆ ಬಳಿಕ ಬೈದೇರುಗಳ ಗರಡಿ ಇಳಿಯಲಿದೆ. ರಾತ್ರಿ ಗಂಟೆ 8ಕ್ಕೆ ಮಾಣಿಬಾಲೆ ಗರಡಿ ಇಳಿಯುವುದು. ಎ.2ಕ್ಕೆ ಬೆಳಿಗ್ಗೆ ನಸುಕಿನ ಜಾವ ಗಂಟೆ 4ಕ್ಕೆ ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟು, ಬಳಿಕ ಬೈದೇರುಗಳ ಸೇಟು, ಅರುಣೋದಯ ವೇಳೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಆಡಳಿತ ಮೊಕ್ತೇಸರ ಎಂ.ಎಸ್ ಕೇಶವ ಶಾಂತಿವನ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here