ಕಡಬ: ಸುರಭಿ ಸಮೂಹದ ಸುರಭಿ ಬಾರ್ & ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ಸುರಭಿ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ
ಸುರಭಿ ಬಾರ್ & ರೆಸ್ಟೋರೆಂಟ್(ಬೋರ್ಡಿಂಗ್ ಮತ್ತು ಲಾಡ್ಜಿಂಗ್) ಕಡಬದ ಕಳಾರ ಕೃಪಾ ರೆಸಿಡೆನ್ಸಿಯಲ್ಲಿ ಮಾ.30 ರಂದು ವೈದಿಕ ಕಾರ್ಯಕ್ರಮದೊಂದಿಗೆ ಶುಭಾರಂಭಗೊಂಡಿದೆ.

ನೂತನ ಸಂಸ್ಥೆಯ ಮಾಲಕರಾದ ರತ್ನಾಕರ ಪೂಜಾರಿ ಮತ್ತು ಅವರ ಪುತ್ರರಾದ ಅಜಯ್ ಪಿ, ಅಜಿತ್ ಪಿ.ರವರು ಸ್ವಾಗತಿಸುತ್ತಾ, ನಮ್ಮಲ್ಲಿ ಶುಚಿರುಚಿಯಾದ ಊಟೋಪಚಾರ ಹಾಗೂ ಹವಾನಿಯಂತ್ರಿತ ಕೊಠಡಿಗಳನ್ನು ಮಿತದರದಲ್ಲಿ ಪೂರೈಸುವುದಾಗಿ ಹೇಳಿ ಸರ್ವರ ಸಹಕಾರವನ್ನು ಕೋರಿದರು.

ಕರುಣಾಕರ ಪೂಜಾರಿ ಮತ್ರಾಡಿ, ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನಿವೃತ್ತ ಆಡಳಿತಾಧಿಕಾರಿ ರಾಧಾಕೃಷ್ಣ ಪೂಜಾರಿ, ಹೊಟೇಲ್ ಸಾಯಿ ಪೂಜಾ ಮಾಲಕ ಯತೀಶ್ ಸುವರ್ಣ, ಪುರಂದರ ರೈ ಕೊಂರ್ಬಡ್ಕ, ಸುರೇಶ್ ಪೂಜಾರಿ ಬಾಕಿಲ,ರಾಮಕೃಷ್ಣ ಶೆಟ್ಟಿ ಸಹಿತ ವಿವಿಧ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here