ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘಕ್ಕೆ ರೂ.5.15ಕೋಟಿ ನಿವ್ವಳ ಲಾಭ

0


ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯಾದ್ಯಂತ 17 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘವು 2022 -23ರ ಆರ್ಥಿಕ ವರ್ಷಾಂತ್ಯಕ್ಕೆ ರೂ. 5.15 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಸಹಕಾರಿಯು ದಿನಾಂಕ:31-03-2023 ರಂತೆ 40075 ಸದಸ್ಯರನ್ನು ಹೊಂದಿ ರೂ.256 ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ರೂ.228ಕೋಟಿ ಸಾಲವನ್ನು ವಿತರಿಸಿ ಒಟ್ಟು ರೂ.484 ಕೋಟಿ ವ್ಯವಹಾರವನ್ನು ದಾಖಲಿಸಿರುತ್ತದೆ. ಪಾಲುಬಂಡವಾಳ ರೂ.9.81ಕೋಟಿ ಹೊಂದಿರುತ್ತದೆ. ಸಹಕಾರಿಯ 18 ನೇ ಶಾಖೆಯು ಬೆಳ್ತಂಗಡಿ ತಾಲೂಕಿನ‌ ಮಡಂತ್ಯಾರಿನಲ್ಲಿ ಶೀಘ್ರವೇ ಉದ್ಘಾಟನೆಗೊಳ್ಳಲಿದೆ .ಸಹಕಾರಿಯು ತನ್ನ ಸದಸ್ಯರಿಂದ ಆಕರ್ಷಕ ಬಡ್ಡಿದರದಲ್ಲಿ ಠೇವಣಿಯನ್ನು ಸ್ವೀಕರಿಸಿ ಸದಸ್ಯರಿಗೆ ವಿವಿಧ ಉದ್ದೇಶಗಳ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ವಿತರಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಸಹಕಾರಿಯ ಪ್ರಗತಿಗೆ ಕಾರಣೀಕರ್ತರಾದ ಎಲ್ಲಾ ಸದಸ್ಯ ಬಾಂಧವರಿಗೂ ಕೃತಜ್ಞತೆಗಳನ್ನು ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಸಂತ ನಾಯಕ್‌ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here