ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಆಚಾರ್ಯ ನಿಧನ

0

ಪುತ್ತೂರು: ಬಿಎಂಎಸ್ ರಿಕ್ಷಾ ಚಾಲಕ, ಮಾಲಕರ ಸಂಘದ ಮಾಜಿ ಅಧ್ಯಕ್ಷ, ಸಾಮೆತ್ತಡ್ಕ ನಿವಾಸಿ ಎಂ.ರಾಮಚAದ್ರ ಆಚಾರ್ಯ(80ವ.)ರವರು ಏ.7ರಂದು ಬೆಂಗಳೂರುನಲ್ಲಿ ಮಗನ ಮನೆಯಲ್ಲಿ ನಿಧನರಾದರು.

ಆರಂಭದಲ್ಲಿ ಅರುಣಾ ಚಿತ್ರ ಮಂದಿರದ ಬಳಿ ರೇಷ್ಮಾ ವಾಚ್ ವರ್ಕ್ಸ್ ಮಳಿಗೆಯನ್ನು ಹೊಂದಿದ್ದ ಅವರು ಬಳಿಕ ಅದನ್ನು ಸ್ಥಗಿತಗೊಳಿಸಿ ರಿಕ್ಷಾ ಚಾಲಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ಈ ಅವಧಿಯಲ್ಲಿ ಬಿಎಂಎಸ್ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೋರ್ಟ್ ರಸ್ತೆ ಅಯ್ಯಪ್ಪ ದೀಪೋತ್ಸವ ಸಮಿತಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಭಜನೆ ಸಹಿತ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.ಮೃತರು ಬೆಂಗಳೂರುನಲ್ಲಿ ಉದ್ಯೋದಲ್ಲಿರುವ ಮಗ ಗೌತಮ್, ಸೊಸೆ ರಾಜೇಶ್ವರಿ, ಸಹೋದರರಾದ ಹರೀಶ್ಚಂದ್ರ, ರವಿಚಂದ್ರ, ಸಹೋದರಿಯರಾದ ಸುಮಿತ್ರಾ ಹಾಗೂ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದ ಉಷಾ ಅವರನ್ನು ಅಗಲಿದ್ದಾರೆ.


ಏ.8ರಂದು ಅಂತ್ಯಕ್ರಿಯೆ:
ಮೃತದೇಹವನ್ನು ಬೆಂಗಳೂರುನಿಂದ ಪುತ್ತೂರುಗೆ ತಂದು ಏ.8ರಂದು ಬೆಳಿಗ್ಗೆ ಇಲ್ಲಿನ ಚಿಕ್ಕಪುತ್ತೂರು ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಮೃತರ ಪುತ್ರ ಗೌತಮ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here