ನೆಲ್ಯಾಡಿ: ಪಿಕಪ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾಂಚನ-ಪೆರಿಯಡ್ಕ ರಸ್ತೆಯ ಬಜತ್ತೂರು ಗ್ರಾಮದ ಮಂಜಿಪಳ್ಳ ಎಂಬಲ್ಲಿ ಎ.6ರಂದು ಮಧ್ಯಾಹ್ನ ನಡೆದಿದೆ.

ಪೆರಿಯಡ್ಕ-ಕಾಂಚನ ರಸ್ತೆಯಲ್ಲಿ ಕಾಂಚನ ಕಡೆಯಿಂದ ಪೆರಿಯಡ್ಕ ಕಡೆಗೆ ಹೋಗುತ್ತಿದ್ದ ಪಿಕಪ್(ಕೆಎ 21 ಎ 1746) ಹಾಗೂ ಪೆರಿಯಡ್ಕದಿಂದ ಕಾಂಚನ ಕಡೆಗೆ ಬರುತ್ತಿದ್ದ ಕಾರು( ಕೆಎ 21 ಎನ್ 2308) ನಡುವೆ ಬಜತ್ತೂರು ಗ್ರಾಮದ ಮಂಜಿಪಳ್ಳ ಎಂಬಲ್ಲಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಕಾರು ಚಾಲಕ ಗೋಳಿತ್ತೊಟ್ಟು ನೂಜೋಳು ನಿವಾಸಿ ಇಸ್ಮಾಯಿಲ್ ಎನ್., ಪ್ರಯಾಣಿಕರಾದ ಸನಾ, ಶಮೀಮಾ ಹಾಗೂ ಮಹಮ್ಮದ್ ಸಿನಾನ್ ಎಂಬವರಿಗೆ ಗಾಯವಾಗಿದೆ. ಗಾಯಾಳುಗಳು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿವೆ. ಕಾರು ಚಾಲಕ ಇಸ್ಮಾಯಿಲ್‌ರವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here