ಆತೂರು ದೇವಸ್ಥಾನದಲ್ಲಿ ವರುಣ ಕೃಪೆಗಾಗಿ ವಿಶೇಷ ಪೂಜೆ; ಗಂಧದ ಕಡ್ಡಿಯಿಂದ ಎರಡು ಸೆಳೆಯಾಗಿ ಹೊರ ಬಂದ ಹೊಗೆ: ಭಕ್ತರಲ್ಲಿ ಅಚ್ಚರಿ

0

ರಾಮಕುಂಜ: ಕಡಬ ತಾಲ್ಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ “ವರುಣ ಕೃಪೆ’ಗಾಗಿ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆ ಎ.8ರಂದು ಜರುಗಿತು. ಈ ವೇಳೆ ಶ್ರೀ ಮಹಾಗಣಪತಿ ಗುಡಿಯಲ್ಲಿ ಹಚ್ಚಿದ ಒಂದು ಗಂಧದ ಕಡ್ಡಿಯಿಂದ ಎರಡು ಸೆಳೆಯಾಗಿ ಹೊರ ಬಂದ ಹೊಗೆಯನ್ನು ಕಂಡು ಭಕ್ತರು ಮೂಕ ವಿಸ್ಮಿತರಾದರು. ಗುಡಿಯ ಒಳಗೆ ಬೇರೆ ಯಾವುದೇ ಬಾಗಿಲು ಅಥವಾ ಕಿಟಕಿ ಇಲ್ಲದೇ ಇದ್ದರೂ, ಗುಡಿಗೆ ಇರುವ ಏಕೈಕ ಬಾಗಿಲಿನ ಮೂಲಕ ಹೊರ ಮುಖವಾಗಿ ಹೊಗೆ ಬಂದಿರುವುದು ನಿಜಕ್ಕೂ ಅಚ್ಚರಿಯೆನಿಸಿತು.

ಈ ಹಿಂದೆಯೂ ಇದೇ ಗುಡಿಯಲ್ಲಿ ಹಚ್ಚಿದ ಗಂದದ ಕಡ್ಡಿಯಿಂದ ಓಂಕಾರ ರೀತಿಯ ಅಕಾರದಲ್ಲಿ ಹೊಗೆ ಹೊರ ಬರುತ್ತಿರುವುದನ್ನು ಭಕ್ತರೊಬ್ಬರು ಕಂಡಿದ್ದಾರೆ ಎನ್ನಲಾಗಿದೆ

LEAVE A REPLY

Please enter your comment!
Please enter your name here