ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್-ಸೇವಾಯೋಜನೆ, ಗೌರವಾರ್ಪಣೆ

0

ಪುತ್ತೂರು :ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟಿನ ಸಮಾಜಮುಖಿ ಕೆಲಸ ಗಳನ್ನು ಗುರುತಿಸಿ ರಾಮನಗರ ಫ್ರೆಂಡ್ಸ್ ಕಾಪು ಪಡು ಇದರ 20 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಅರ್ಜುನಗುಳಿ ಹಾಗೂ ಕಾರ್ಯದರ್ಶಿ ಮನೋಹರ್ ಪಲಯಮಜಲು ಇವರನ್ನು ವೇದಿಕೆಯಲ್ಲಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿನ ಪೋಷಕ ಈಶ್ವರ್ ಮಲ್ಪೆಯವರನ್ನು ಗೌರವಿಸಲಾಯಿತು. ಕಾಪು ಶ್ರೀ ಮಾರಿಯಮ್ಮ ಅಮ್ಮನವರ ಮಾರಿ ಉತ್ಸವದ ಸಂದರ್ಭದಲ್ಲಿ ಹೃದಯ ಸಮಸ್ಯೆಯಿಂದ ಬಲಳುತ್ತಿರುವ ಧರ್ಮಪಾಲ ಇವರ ಚಿಕಿತ್ಸೆಗೆ ನೆರವಾಗಲು ರಾಮನಗರ ಫ್ರೆಂಡ್ಸ್ ಕಾಪು ಪಡು ಇವರ ಸಹಕಾರದಲ್ಲಿ ನಡೆಸಿದ ನಿಧಿ ಸಂಗ್ರಹ ಅಭಿಯಾನದಲ್ಲಿ ಒಟ್ಟಾದ ಒಟ್ಟಾದ ಮೊತ್ತ 50,001 ರೂ ಚೆಕ್ಕನ್ನು ಗಣ್ಯರ ಉಪಸ್ಥಿಯಲ್ಲಿ ಈಶ್ವರ್ ಮಲ್ಪೆ ಹಾಗೂ ಸಚಿನ್ ಕಾಪು, ಟ್ರಸ್ಟಿನ ಪದಾಧಿಕಾರಿಗಳು ಫಲಾನುಭವಿ ಧರ್ಮಪಾಲ ಇವರಿಗೆ ವೇದಿಕೆಯಲ್ಲಿ ಹಸ್ತಾಂತರ ಮಾಡಲಾಯಿತು .

LEAVE A REPLY

Please enter your comment!
Please enter your name here