ತಮಿಳುನಾಡಿನ ವ್ಯಕ್ತಿ ಪುತ್ತೂರಿನಲ್ಲಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಮೂಲತಃ ತಮಿಳುನಾಡಿನ ವ್ಯಕ್ತಿಯೊಬ್ಬರು ಪುತ್ತೂರು ಬಾಡಿಗೆ ಮನೆಯೊಂದರದಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ಎ.10ರಂದು ನಡೆದ ಬಗ್ಗೆ ವರದಿಯಾಗಿದೆ.


ತಮಿಳುನಾಡಿನ ಕರೂರು ಜಿಲ್ಲೆಯವರಾಗಿದ್ದು, ಪುತ್ತೂರು ಬೊಳುವಾರು ಬೈಪಾಸ್ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿರುವ ನಂದಕುಮಾರ್(50ವ) ಹೃದಯಘಾತದಿಂದ ನಿಧನರಾದವರು.

ಎ.3ರಂದು ಅವರ ಪತ್ನಿ ಗೋಮತಿ ಮತ್ತು ಪುತ್ರ ತಮಿಳುನಾಡು ಊರಿಗೆ ತೆರಳಿದ್ದರು. ಎ.10ರಂದು ಬೆಳಿಗ್ಗೆ ಅವರ ಪತ್ನಿ ಗೋಮತಿಯವರು ಗಂಡ ನಂದಕುಮಾರ್‌ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದಾಗ ಪರಿಚಯದ ನೆಹರುನಗರದಲ್ಲಿರುವ ಅರಿವಳಗನ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು. ಅರಿವಳಗನ್ ಅವರು ಬೊಳುವಾರು ನಂದ ಕುಮಾರ್ ಅವರ ಬಾಡಿಗೆ ಮನೆಗೆ ಬಂದು ನೋಡಿದಾಗ ನಂದ ಕುಮಾರ್ ಅವರು ಮಲಗಿದ್ದ ಸ್ಥಿತಿಯಲ್ಲಿದ್ದು ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದ ವೇಳೆ ಅವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here