ಉಬಾರ್ ಡೋನಾರ್‍ಸ್‌ನಿಂದ ಸೌಹಾರ್ದತೆಯ ಇಫ್ತಾರ್

0

ಉಪ್ಪಿನಂಗಡಿ: ಐಕ್ಯತೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿರುವ ಉಬಾರ್ ಡೋನರ್‍ಸ್ ಹೆಲ್ಪ್‌ಲೈನ್ ಸಂಸ್ಥೆಯ ವತಿಯಿಂದ ಉಪ್ಪಿನಂಗಡಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.


ಇಲ್ಲಿನ ಬ್ಯಾಂಕ್ ಬರೋಡಾ ಶಾಖೆಯ ಬಳಿ ನಡೆದ ಇಫ್ತಾರ್ ಕೂಟದಲ್ಲಿ ಜಾತಿ, ಧರ್ಮಗಳ ಹಂಗಿಲ್ಲದೆ ಉಪ್ಪಿನಂಗಡಿಯ ಹಿಂದೂ, ಕ್ರೈಸ್ತ ಬಾಂಧವರು ಮುಸ್ಲಿಂ ಸಮುದಾಯದ ಉಪವಾಸ ವೃತಧಾರಿಗಳಿಂದಿಗೆ ಇಫ್ತಾರ್‌ಕೂಟದಲ್ಲಿ ಭಾಗವಹಿಸಿ, ಪರಸ್ಪರ ಸೌಹಾರ್ದತೆ, ಸಹೋದರತೆಯ ಮಾತುಗಳನ್ನು ಹಂಚಿಕೊಂಡು ಸಹಭೋಜನದಲ್ಲಿ ಪಾಲ್ಗೊಂಡರು.


ಸಮಾರಂಭದಲ್ಲಿ ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ, ಮೊಕ್ತೇಸರ ಡಾ. ಎಂ.ಆರ್. ಶೆಣೈ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ., ಸಂಜೀವ ಗಾಣಿಗ, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಪೊಲೀಸ್ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್, ಉಪ್ಪಿನಂಗಡಿ ದೀನರ ಕನ್ಯಾ ಮಾತೆ ಚರ್ಚ್‌ನ ಮಾಜಿ ಉಪಾಧ್ಯಕ್ಷ ರಾಬರ್ಟ್ ಡಿಸೋಜಾ, ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್, ಕೆಮ್ಮಾರ ಶರೀಅತ್ ಕಾಲೇಜು ಸಂಚಾಲಕ ಎಸ್.ಬಿ. ಮಹಮ್ಮದ್ ದಾರಿಮಿ, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಖಜಾಂಚಿ ಮಹಮ್ಮದ್ ಮುಸ್ತಫಾ, ಕರ್‍ವೇಲ್ ಮಸೀದಿ ಅಧ್ಯಕ್ಷ ತೋಜಾ ಉಮರಬ್ಬ, ವೈದ್ಯ ಡಾ. ನಿರಂಜನ ರೈ, ಉಪ್ಪಿನಂಗಡಿ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ವಿಶ್ರುತಿ, ವಕೀಲರಾದ ಅರವಿಂದ ಭಂಡಾರಿ, ಅಶ್ರಫ್ ಅಗ್ನಾಡಿ, ನಝೀರ್ ಬೆದ್ರೋಡಿ, ಉದ್ಯಮಿಗಳಾದ ಶಿವಪ್ರಸಾದ್, ಪ್ರಸಾದ್ ಶೆಣೈ, ಇಬ್ರಾಹಿಂ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಯು.ಕೆ. ಇಬ್ರಾಹಿಂ, ಅಬ್ದುಲ್ ರಶೀದ್, ವಿದ್ಯಾಲಕ್ಷ್ಮಿ ಪ್ರಭು, ನೆಕ್ಕಿಲಾಡಿ ಪಂಚಾಯತ್ ಸದಸ್ಯ ರಮೇಶ್ ನೆಕ್ಕಿಲಾಡಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಡಿ.ಕೆ. ಅಯ್ಯೂಬ್, ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹಾಜಿ ಪೆದಮಲೆ, ಸ್ಥಳೀಯ ಪ್ರಮುಖರಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಇಸ್ಮಾಯಿಲ್ ತಂಙಳ್, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.


ಉಬಾರ್ ಡೋನರ್‍ಸ್ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ ಶಬ್ಬೀರ್ ಕೆಂಪಿ ನೇತೃತ್ವದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್, ಸಿದ್ದಿಕ್ ಕೆಂಪಿ, ಇಬ್ರಾಹಿಂ ಆಚಿ ಕೆಂಪಿ, ಶುಕೂರ್ ಮೇದರಬೆಟ್ಟು, ಜಮಾಲ್ ಕೆಂಪಿ, ಶಬೀರ್ ನಂದಾವರ, ಶುಕೂರ್ ಕೆಂಪಿ, ಅನಸ್ ದಿಲ್ದಾರ್, ರಿಯಾಝ್ ಇಂಡಿಯನ್, ಇರ್ಷಾದ್ ಯು.ಟಿ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here