ಮನೆ ಮನೆಗೆ ಗಂಗೆ ಯೋಜನೆ: ಪೆರ್ನೆ ಬಿಳಿಯೂರು ಬಳಪ್ಪು ನಿವಾಸಿಗಳ ನೀರಿನ ಸಮಸ್ಯೆಗೆ ಮುಕ್ತಿ

0

ಪುತ್ತೂರು: ಹಲವು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಪೆರ್ನೆ ಬಿಳಿಯೂರು ಗ್ರಾಮದ ನಿವಾಸಿಗಳಿಗೆ ಮನೆ ಮನೆಗೆ ಗಂಗೆ ಯೋಜನೆಯ ಮೂಲಕ ಬೋರ್‌ವೆಲ್ ಹಾಕಿಸಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.

ಬಂಟ್ಚಾಳ ತಾಲೂಕಿನ ಪೆರ್ನೆ ಬಿಳಿಯೂರು ಗ್ರಾಮದ ಬಲಪ್ಪು, ನೀರೊಳ್ಬೆ, ನಿವಾಸಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ನೀರಿನ ಸಮಸ್ಯೆ ಅತಿಯಾಗಿ ಕಾಡಿತ್ತು. ಈ ಹಿಂದೆ ನೀರಿನ ವ್ಯವಸ್ಧೆಗಾಗಿ ಪಂಚಾಯತ್‌ನಿಂದ ಹಾಕಲಾಗಿದ್ದ ಬೋರ್ ವೆಲ್‌ನಲ್ಲಿ ನೀರು ಬಾರದ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ಗ್ರಾ.ಪಂ.ಸದಸ್ಯ ನವೀನ್ ಕುಮಾರ್ ಪದಬರಿ ರವರಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಪೆರ್ನೆ ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿ ಹಾಗೂ ಸದಸ್ಯ ನವೀನ್ ಕುಮಾರ್ ಪದಬರಿಯವರು ಮನೆ ಮನೆಗೆ ಗಂಗೆ ಯೋಜನೆಯ ಮೂಲಕ ಹೊಸ ಬೋರ್‌ವೆಲ್ ಹಾಕಿಸಿ ನಿವಾಸಿಗಳು ನೀರಿಗಾಗಿ ಎದುರಿಸುತ್ತಿದ್ದ ಸಮಸ್ಯೆಯನ್ನು ದೂರಮಾಡಿದ್ದಾರೆ.

LEAVE A REPLY

Please enter your comment!
Please enter your name here