ಪುತ್ತೂರು ಜಾತ್ರೆ ಹಿನ್ನೆಲೆ – ಸೋಮವಾರ ಕಿಲ್ಲೆ ಮೈದಾನದ ಸಂತೆ ರದ್ದು

0

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಲುವಾಗಿ ಎ.17ರಂದು ಜರುಗುವ ಬ್ರಹ್ಮರಥೋತ್ಸವದಂದು ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಎ.17ರ ಸೋಮವಾರದಂದು ಕಿಲ್ಲೆ ಮೈದಾನದಲ್ಲಿನ ಪುತ್ತೂರು ಸಂತೆಯನ್ನು ರದ್ದುಗೊಳಿಸಲಾಗಿದೆ.

ಪ್ರತಿ ಬಾರಿ ಬ್ರಹ್ಮರಥೋತ್ಸವದಂದು ಪುತ್ತೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆ ದಿನ ವಾಹನ ಪಾರ್ಕಿಂಗ್ ಗೆ ಕಿಲ್ಲೆ ಮೈದಾನ ಸಹಿತ ಹಲವಾರು ಮೈದಾನಗಳನ್ನು ಗುರುತಿಸಲಾಗುತಿತ್ತು. ಈ ಬಾರಿ ಎ.17ರಂದು ಸೋಮವಾರ ಅದ್ದರಿಂದ ಕಿಲ್ಲೆ ಮೈದಾನದಲ್ಲಿ ಸಂತೆಯಿಂದಾಗಿ ವಾಹನ ಪಾರ್ಕಿಂಗ್ ಅವಕಾಶಕ್ಕೆ ತೊಂದರೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸೋಮವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕರು ಪುತ್ತೂರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here