ಕೊಕ್ಕಡ: ಜೇಸಿಐ ಆಡಳಿತ ಸಭೆ-ಚುನಾವಣೆ ಅರಿವು ಆಂದೋಲನ

0


ನೆಲ್ಯಾಡಿ: ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಆಡಳಿತ ಮಂಡಳಿ ಸಭೆ ಕೊಕ್ಕಡ ಮರಿಯಾಕೃಪಾ ಕಚೇರಿಯಲ್ಲಿ ಎ.22ರಂದು ಜರುಗಿತು.


ಜೆಸಿಐ ಕೊಕ್ಕಡ ಕಪಿಲಾ ಇದರ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದಲ್ಲಿ ಮತದಾನದ ಅರಿವು ಮೂಡಿಸುವುದು. ಶೇಕಡಾ ನೂರರಷ್ಟು ಮತದಾನ ಮಾಡಲು ಜಾಗ್ರತಿ ಮಾಡುವುದು, ಅಶಕ್ತರಿಗೆ ದಾನ ಕಾರ್ಯಕ್ರಮ, ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಮುಂತಾದ ರಾಷ್ಟ್ರೀಯ ಸೇವಾ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಯಿತು. ಜೋಸೆಫ್ ಪಿರೇರಾ ಜೇಸಿವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here