ಬೊಳುವಾರು ವಿಶ್ವ ಬ್ರಾಹ್ಮಣ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

0

ಕೆ. ಶ್ರೀಧರ್ ಆಚಾರ್ಯ ಅಧ್ಯಕ್ಷ, ಆನಂದ ಆಚಾರ್ಯ ಕಾರ್ಯದರ್ಶಿ

ಪುತ್ತೂರು: ಬೊಳುವಾರು ವಿಶ್ವ ಬ್ರಾಹ್ಮಣ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್. ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ವಿಶ್ವಕರ್ಮ ಯುವ ಸಮಾಜದ ಮಾಜಿ ಅಧ್ಯಕ್ಷ, ಪುತ್ತೂರು ರೋಟರಿ ಕ್ಲಬ್ ಸದಸ್ಯ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ, ಕೋರ್ಟ್ ರಸ್ತೆಯಲ್ಲಿರುವ ಐಶ್ವರ್ಯ ಜ್ಯುವೆಲ್ಲರ್ಸ್ ಮಾಲಕ ಶ್ರೀಧರ ಆಚಾರ್ಯ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಸಂಘದ ಸ್ಥಳ ದಾನಿ ಅಣ್ಣಿ ಆಚಾರ್ಯ, ಎಸ್. ಭುಜಂಗ ಆಚಾರ್ಯ, ಕಾರ್ಯದರ್ಶಿಯಾಗಿ ಮಂಗಳೂರು ಎಸ್.ಕೆ.ಜಿ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ, ಕೋರ್ಟ್ ರಸ್ತೆಯಲ್ಲಿರುವ ಆಶಿತಾ ಜ್ಯುವೆಲ್ಲರ್ಸ್ ಮಾಲಕ ಆನಂದ ಆಚಾರ್ಯ ಅಜ್ಜಿನಡ್ಕ, ಕೋಶಾಧಿಕಾರಿಯಾಗಿ ಬೊಳುವಾರು ವಿ.ಕೆ.ಸ್ಟೀಲ್ಸ್ ಟ್ರೇಡರ್ಸ್ ಮಾಲಕ ವಸಂತ, ಆಚಾರ್ಯ, ಜತೆ ಕಾರ್ಯದರ್ಶಿಯಾಗಿ ಎಮ್. ಉಮೇಶ್ ಆಚಾರ್ಯ ಆಯ್ಕೆಯಾದರು.


ನಿಕಟಪೂರ್ವ ಅಧ್ಯಕ್ಷರಾಗಿ ಜಗದೀಶ್ ಎಸ್.ಎನ್., ಸದಸ್ಯರಾಗಿ ರಮೇಶ್ ಆಚಾರ್ಯ ಮಾಮೇಶ್ವರ, ಕೃಷ್ಣ ಆಚಾರ್ಯ ಕೆ., ನಾರಾಯಣ ಆಚಾರ್ಯ ಎಮ್., ಶ್ರೀನಿವಾಸ ಆಚಾರ್ಯ ಪಡೀಲು, ಶಾಂತ ಉಪೇಂದ್ರ ಆಚಾರ್ಯ, ಉಷಾ ಸದಾನಂದ ಆಚಾರ್ಯ, ಸಂಘದ ಸ್ಥಳದಾನಿ ವಾಸುದೇವ ಆಚಾರ್ಯ, ಸುರೇಂದ್ರ ಆಚಾರ್ಯ, ಕಿಶನ್ ಬಿ.ವಿ., ನಾಗೇಶ್ ಆಚಾರ್ಯ, ಕಿಶೋರ್ ಆಚಾರ್ಯ, ಗಂಗಾಧರ ಆಚಾರ್ಯ ಎಂ., ದಿನೇಶ್ ಆಚಾರ್ಯ ಮರೀಲು ಆಯ್ಕೆಯಾದರು.

LEAVE A REPLY

Please enter your comment!
Please enter your name here