ಬಿಜೆಪಿ 5 ವರ್ಷದಲ್ಲಿ ಮಾಡಿದ ಅಭಿವೃದ್ದಿಯನ್ನು ತಿಳಿಸಲಿ: ಅಶೋಕ್ ರೈ

0

ಪುತ್ತೂರು: ಕಳೆದ 5 ವರ್ಷಗಳಲ್ಲಿ ಬಿಜೆಪಿ ಮಾಡಿದ ಅಭಿವೃದ್ದಿ ಕೆಲಸವನ್ನು ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸವಾಲು ಹಾಕಿದರು. ಅಲ್ಲೊ ಇಲ್ಲೋ ಕೆಲವು ಕಡೆ ರಸ್ತೆಗೆ ಡಾಮಾರು,ಸಿಮೆಂಟ್ ಹಾಕಿದ್ದನ್ನು ಬಿಟ್ಟರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ . ಅಕ್ರಮ ಸಕ್ರಮ ಕಡತಗಳನ್ನು ಹಣ ಕೊಡದೆ ವಿಲೇವಾರಿ ಮಾಡಿದ್ದಾರ? ಬಡವರ ಕಣ್ಣೀರೊರೆಸುವ ಕೆಲಸವನ್ನು ಬಿಜೆಪಿ ಮಾಡಿಯೇ ಇಲ್ಲ. 40% ಕಮಿಷನ್ ಹೊಡೆಯುವ ಉದ್ದೇಶದಿಂದ ಹೆಚ್ಚು ಅನುದಾನವನ್ನು ರಸ್ತೆಗೆ ಬಳಕೆ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಂಜೂರು ಮಾಡಿಸಿಲ್ಲ. ಸಾವಿರಾರು ಕುಟುಂಬಗಳು ಸರಕಾರದ ವಸತಿ ಯೋಜನೆಯಲ್ಲಿ ಮನೆ ನಿವೇಶನಕ್ಕೆ ಅರ್ಜಿ ಹಾಕಿದರೂ ಬಿಜೆಪಿ ಸರಕಾರ ಮನೆ ನೀಡಿಲ್ಲ ಇದು ಬಡವರಿಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಹೇಳಿದರು.

ಅಳಿಕೆ ಗ್ರಾಮದ ಮುಳಿಯದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನಿಶಾಂತ್ ಶೆಟ್ಟಿ ನೇತ್ವತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಅಭ್ಯರ್ಥಿ ಅಶೋಕ್ ರೈ ಪಕ್ಷದ ದ್ವ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here