ಪುಣಚದಲ್ಲಿ‌ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಬ್ರಷ್ಟಾಚಾರ ಮಾಡಿದ ದುಡ್ಡಲ್ಲೇ ಶಾಸಕರಿಗೆ ಮೆಡಿಕಲ್ ಕಾಲೇಜಿಗೆ ಫೌಂಡೇಷ್ ಕಟ್ಟಬಹುದಿತ್ತು: ಅಶೋಕ್ ರೈ

ಪುತ್ತೂರು:ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡುವುದಾಗಿ ಐದು ವರ್ಷದಿಂದ ಶಾಸಕರು ಹೇಳುತ್ತಿದ್ದಾರೆ ಕಾಲೇಜು ಬಿಡಿ ಫೌಂಡೇಷನ್ ಕೂಡಾ ಹಾಕ್ಲಿಕ್ಕೆ ಸಾಧ್ಯವಾಗಿಲ್ಲ. ಶಾಸಕರಿಗೆ ಮನಸ್ಸು ಮಾಡಿದ್ದರೆ ಅವರು ಭೃಷ್ಟಾಚಾರ ಮಾಡಿದ ದುಡ್ಡಲ್ಲೇ ಪೌಂಡೇಷನ್ ಕಟ್ಟಬಹುದಿತ್ತು ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಅದೇ ಕಾರಣಕ್ಕೆ ಅವರನ್ನು ಹೊರಗೆ ದಬ್ಬಲಾಗಿದೆ ಎಂದು ಹೇಳಿದ ಅವರು ಬಿಜೆಪಿಗೆ ಪುತ್ತೂರಿನಲ್ಲಿ ಅಭ್ಯರ್ಥಿಯೇ ಇಲ್ಲದಂತ ಪರಿಸ್ಥಿತಿ‌ನಿರ್ಮಾಣವಾಗಿದೆ.


ಹಿಂದುತ್ವ ಹಿಂದುತ್ವ ಎಂದು ಪದೇ ಪದೇ ಹೇಳುತ್ತಿರುವ ಬಿಜೆಪಿಗರು ದಾಖಲೆ ಸರಿ ಇಲ್ಲದ ದೇವಸ್ಥಾನ, ದೈವಸ್ಥಾನದ ಜಾಗವನ್ನು ರೆಕಾರ್ಡ್ ಯಾಕೆ ಸರಿ‌ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜೊತೆ ಕೈಜೋಡಿಸುವಂತೆ ಬಿಜೆಪಿಗರಿಗೆ ಮನವಿ‌ಮಾಡಿದರು. ಆರ್ಯಾಪು ಗ್ರಾಪಂ‌ನ‌ಮೂವರು ಬಿಜೆಪಿ ಬೆಂಬಲತ ಸದಸ್ಯರು ಅಕ್ರಮ ಸಕ್ರಮದ ವ್ಯವಹಾರವನ್ನು ಬಯಲು ಮಾಡಿದ್ದಾರೆ ಎಂದರು. ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪರ ಪ್ರಚಾರ ಮಾಡುವಂತೆ ಕರೆ ಮಾಡಿದರು.
ಸಮಾಜದ ಕಟ್ಟಕಡೇಯ ವ್ಯಕ್ತಿ ಜೊತೆಗೂ ಸಂಪರ್ಕ ಇರಿಸಿಕೊಳ್ಳಿ ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here