ಚುನಾವಣೆ ನಿರ್ವಹಣೆಗೆ ಹಣದ ನೆರವು-ಪುತ್ತಿಲರ ಮನವಿ ; ಬ್ಯಾಂಕ್ ಖಾತೆ ಮಾಹಿತಿಯುಳ್ಳ ಪೋಸ್ಟರ್ ಬಿಡುಗಡೆ:ಬೆಂಬಲಿಗರಿಂದ ಸ್ಪಂದನೆ

0

ಪುತ್ತೂರು:ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಮನವಿಗೆ ಬೆಂಬಲಿಗರು ಮತ್ತು ಅಭಿಮಾನಿಗಳು ಸ್ಪಂದಿಸಿದ್ದು ಚುನಾವಣೆ ಎದುರಿಸಲು ಅಗತ್ಯ ಹಣದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲರ ಬೆಂಬಲಿಗರಿಂದ ನಡೆದ ಮಹಿಳಾ ಸಮಾವೇಶ ‘ಸೀತಾಪರಿವಾರ’ದಲ್ಲಿ ಅರುಣ್ ಕುಮಾರ್ ಪುತ್ತಿಲರು, ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಅದಕ್ಕೆ ಅಧಿಕಾರ ಹಾಗೂ ಹಣ ಬಲ ಬೇಕು. ನಿಮ್ಮ ಒಂದೊಂದು ಓಟಿನ ಜೊತೆಗೆ 10 ರೂಪಾಯಿಯಂತೆ ನೀಡಿ ನಿಮ್ಮ ಮನೆ ಮಗನ ರೀತಿ ಬೆಂಬಲಿಸಿ ಎಂದು ಬೇಡಿಕೊಂಡಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು.ಅವರ ಅಭಿಮಾನಿಗಳು ನಡುರಾತ್ರಿಯೂ ಕರೆ ಮಾಡಿ ಬ್ಯಾಂಕ್ ಅಕೌಂಟ್ ನಂಬರ್, ಕ್ಯೂ ಆರ್ ಕೋಡ್ ಕೇಳುತ್ತಿದ್ದರು. ಪುತ್ತಿಲರ ಚುನಾವಣೆ ನಿರ್ವಹಣೆಯ ಐಟಿ ಸೆಲ್ ವತಿಯಿಂದ ಅಕೌಂಟ್ ನಂಬರ್, ಕ್ಯೂ ಆರ್ ಕೋಡ್, ಯುಪಿಐ ನಂಬರ್‌ನ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಪೋಸ್ಟರ್ ರೀಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಣ ಜಮೆಯಾಗಲು ಆರಂಭಗೊಂಡಿದ್ದು ಪುತ್ತಿಲ ಅಭಿಮಾನಿ, ಬೆಂಬಲಿಗರಿಂದ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತಿದೆ.

LEAVE A REPLY

Please enter your comment!
Please enter your name here