ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಕಾರ್ಮಿಕ ಸಂಘದಿಂದ ಕಾರ್ಮಿಕ ದಿನಾಚರಣೆ, ರಕ್ತದಾನ ಶಿಬಿರ

0

ಪುತ್ತೂರು: ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪುತ್ತೂರು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆ, ರಕ್ತದಾನ ಶಿಬಿರ ನಡೆಯಿತು.


ಬೆಳಿಗ್ಗೆ ಕ್ಯಾಂಪ್ಕೋ ಮುಂಭಾಗ ಧ್ವಜಾರೋಹಣ ನೆರವೇರಿಸಲಾಯಿತು. ನಿವೃತ್ತ ಹಿರಿಯ ನೌಕರ ಪದ್ಮನಾಭ ಭಟ್‌ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ತೀರ್ಥರಾಮ ಎಸ್., ಉಪಾಧ್ಯಕ್ಷ ಸುಬ್ರಾಸ್, ಕಾರ್ಯದರ್ಶಿ ನವೀನ್, ಖಜಾಂಜಿ ಸುನಿಲ್, ಮಹೇಶ್, ಪದ್ಮನಾಭ, ಪ್ರಮೋದ್ ಮಲ್ಲಾರ ಹಾಗೂ ಇತರೇ ಸದಸ್ಯರು ಉಪಸ್ಥಿತರಿದ್ದರು. ಖಾದರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಘದ ಸದಸ್ಯರು ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here