ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದ ಉತ್ತಮ್ ಗೆ ಬಿಜೆಪಿಯಿಂದ ಅಭಿನಂದನೆ

0

ಕಾಣಿಯೂರು: SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ರಾಜ್ಯದಲ್ಲಿ ತೃತೀಯ ಸ್ಥಾನಗಳಿಸಿದ ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಗೌಡ-ಹೇಮಾವತಿ ದಂಪತಿಗಳ ಪುತ್ರ ಉತ್ತಮ್ .ಜಿ. ಇವರನ್ನು ಕಾಣಿಯೂರು ಬಿಜೆಪಿ ಬೂತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರಾದ ಪದ್ಮಯ್ಯ ಗೌಡ ಅನಿಲ, ಧರ್ಮೇಂದ್ರ ಗೌಡ ಕಟ್ಟತ್ತಾರು, ಮುರಳೀಧರ ಪುಣ್ಚತ್ತಾರು, ಪುಟ್ಟಣ್ಣ ಗೌಡ ಮುಗರಂಜ, ಸುಂದರ ಬೆದ್ರಾಜೆ, ಸುರೇಶ್ ಬಂಡಾಜೆ, ರಾಮಣ್ಣ ಗೌಡ ಮುಗರಂಜ, ಲಕ್ಷ್ಮಣ ಗೌಡ ಮುಗರಂಜ, ತಿಮ್ಮಪ್ಪ ಗೌಡ ಕಟ್ಟತ್ತಾರು, ರಮೇಶ್ ಕಟ್ಟತ್ತಾರು, ಸುರೇಶ್ ಓಡಬಾಯಿ ವಿದ್ಯಾರ್ಥಿಯ ತಂದೆ ಪದ್ಮನಾಭ ಗೌಡ ಗುಂಡಿಗದ್ದೆ, ತಾಯಿ ಹೇಮಾವತಿ, ಸಹೋದರಿ ಅಖಿಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here