ಮಾಣಿ: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

0

ವಿಟ್ಲ : ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಕಾಯರಡ್ಕ ಎಂಬಲ್ಲಿ ನಡೆದಿದೆ. ರಿಜಿ ಜಾನ್ (50 ವ.) ಮೃತಪಟ್ಟವರಾಗಿದ್ದಾರೆ.


ರಿಜಿ ಜಾನ್ ರವರು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಕಾಯರಡ್ಕ ಎಂಬಲ್ಲಿರುವ ವಾಲ್ಟರ್ ಡಿಸೋಜ್ ರವರು ರೈಟರ್ ಆಗಿ ಕೆಲಸ ಮಾಡುವ ತೋಟದಲ್ಲಿ ಸುಮಾರು ೪ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು.


ಮೇ.2 ರಂದು ವಾಲ್ಟರ್ ರವರು ಕಾಯರಡ್ಕದ ರಬ್ಬರ್ ತೋಟಕ್ಕೆ ಹೋಗಿ ರಿಜಿ ಅವರಿಗೆ ಸಂಬಳವನ್ನು ನೀಡಿ ಹಿಂದಿರುಗಿದ್ದರು. ಆ ಬಳಿಕ ಮೇ.೧೨ ರಂದು ಕಾಯರಡ್ಕದ ತೋಟದಲ್ಲಿರುವ ರಿಜಿ ವಾಸಿಸುತ್ತಿದ್ದ ಮನೆಯ ಬಳಿ ಬಂದಾಗ ಮನೆ ಒಳಗಿನಿಂದ ದುರ್ವಾಸನೆ ಬರುತ್ತಿದ್ದು, ಮನೆಯ ಮುಂದಿನ ಬಾಗಿಲ ಮೂಲಕ ಇಣುಕಿ ನೋಡಿದಾಗ ರಿಜಿಜಾನ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿತ್ತು. ರಿಜಿಜಾನ್‌ರವರು ವಿಪರೀತ ಮದ್ಯೆ ಸೇವನೆಯ ಚಟವನ್ನು ಹೊಂದಿದ್ದ ಕಾರಣ ಅಸೌಖ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬೇಕೆಂದು ವಾಲ್ಟರ್ ಡಿಸೋಜರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here