ಚೆನ್ನೈ- ಮಾಧ್ಯಮದೊಂದಿಗೆ ಪುತ್ತೂರು ಚುನಾವಣಾ ಫಲಿತಾಂಶ ಬಗ್ಗೆ ಉಲ್ಲೇಖಿಸಿದ ಅಣ್ಣಾಮಲೈ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ರಾಷ್ಟ್ರೀಯ ಪಕ್ಷ ಬಿಜೆಪಿಗಿಂತ ಅತೀ ಹೆಚ್ಚು ಮತ ಪಡೆದಿರುವುದು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ಚುನಾವಣಾ ವೇಳೆ ಪುತ್ತೂರಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರ ನಡೆಸಿದ್ದರು.ಚುನಾವಣಾ ಫಲಿತಾಂಶ ಹೊರ ಬಿದ್ದಾಗ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಅಭ್ಯರ್ಥಿಯನ್ನು 3ನೇ ಸ್ಥಾನಕ್ಕೆ ತಳ್ಳಿ, ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎದುರು ಸೋಲನುಭವಿಸಿದ್ದರು. ಈ ವಿಚಾರವನ್ನು ಅಣ್ಣಾ ಮಲೈ ಚೆನ್ನೈ ನಲ್ಲಿ ಟಿ ವಿ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ.ಆದರೆ ಯಾವ ಕಾರಣಕ್ಕೆ ಪುತ್ತಿಲ ಹೆಸರನ್ನು ಪ್ರಸ್ಥಾಪಿಸಿದ್ದಾರೆಂದು ತಿಳಿದು ಬಂದಿಲ್ಲಾವಾದರೂ,ಹೇಳಿಕೆ ವೀಡಿಯೋ ಬಿಜೆಪಿ ವಲಯದಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ಅಣ್ಣಾ ಮಲೈ ಹೇಳಿಕೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here