ಮುಕ್ರಂಪಾಡಿ: ರಿಕ್ಷಾ ಪಲ್ಟಿ-ಕುಂಬ್ರದ ಅಶೋಕ್ ಬಡಕ್ಕೋಡಿಗೆ ಗಂಭೀರ ಗಾಯ

0

ಪುತ್ತೂರು: ಸ್ಕೂಟರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಿಕ್ಷಾವೊಂದು ಮಗುಚಿ ಬಿದ್ದು ಚಾಲಕ ಗಂಭೀರ ಗಾಯಗೊಂಡ ಘಟನೆ ಮೇ.18 ರಂದು ಮುಕ್ರಂಪಾಡಿಯಲ್ಲಿ ನಡೆದಿದೆ.

ಕುಂಬ್ರ ರಿಕ್ಷಾ ಕ್ಯೂನಲ್ಲಿ ಬಾಡಿಗೆ ಮಾಡಿಕೊಂಡಿದ್ದ ಅಶೋಕ್ ಪೂಜಾರಿ ಬಡಕ್ಕೋಡಿಯವರು ಗಾಯಗೊಂಡ ರಿಕ್ಷಾ ಚಾಲಕರಾಗಿದ್ದಾರೆ. ಅಶೋಕ್ ಪೂಜಾರಿಯವರು ಪುತ್ತೂರಿನಿಂದ ಕುಂಬ್ರಕ್ಕೆ ಬರುತ್ತಿದ್ದು ಈ ವೇಳೆ ಸಂಪ್ಯ ಅಟೋ ಗ್ಯಾಸ್ ಬಂಕ್ ಬಳಿ ಸ್ಕೂಟರ್ ಸವಾರರೋರ್ವರು ಮುಖ್ಯರಸ್ತೆಗೆ ತನ್ನ ಸ್ಕೂಟರ್ ಅನ್ನು ಚಲಾಯಿಸಿದ್ದು ಈ ವೇಳೆ ಸ್ಕೂಟರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಪೊಲೀಸ್ ಜೀಪಿಗೆ ತಾಗಿ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here