ಯತ್ನಾಳ್‌ರನ್ನು ಸ್ವಾಗತಿಸಿ ಅರುಣ್‌ ಕುಮಾರ್‌ ಪುತ್ತಿಲ ಹೇಳಿದ್ದಾದರೂ ಏನು?

0

ಪುತ್ತೂರು: ಬಿಜಾಪುರದ ಬಿಜೆಪಿ ಶಾಸಕ, ಫೈರ್‌ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪುತ್ತೂರಿಗೆ ಆಗಮಿಸಿದ್ದಾರೆ.ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಪುತ್ತೂರಿಗೆ ಆಗಮಿಸಿದ ಯತ್ನಾಳ್‌ ಪಂಚವಟಿಗೆ ತೆರಳಿ ಅಲ್ಲಿಂದ ಬಿಜೆಪಿ ಕಚೇರಿಗೆ ತೆರಳಿದರು. ಬ್ಯಾನರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲೆಂದು ಪುತ್ತೂರಿಗೆ ಆಗಮಿಸಿದ ಯತ್ನಾಳ್‌ ಅವರನ್ನು ಅರುಣ್‌ ಕುಮಾರ್‌ ಪುತ್ತಿಲ ಸೇರಿದಂತೆ ಹಲವರು ಸ್ವಾಗತಿಸಿದರು.ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಸ್ವಾಗತಿಸಿದ ಪುತ್ತಿಲ “ನಮ್ಮವರು ಯಾರು? ಯಾರು ನಮ್ಮವರಲ್ಲ ಎಂದು ಗೊತ್ತಾಗುತ್ತಿಲ್ಲ ನೀವು ನಮಗೆ ನ್ಯಾಯ ದೊರಕಿಸಿ ಕೊಡಬೇಕು. ಎದುರಿಗೊಂದು ,ಹಿಂದಿನಿಂದೊಂದು ಮಾಡುವ ಕೆಲಸದಿಂದ ಹೀಗೆಲ್ಲ ಆಗಿರುವಂತದ್ದು” ಎಂದು ಭಿನ್ನವಿಸಿಕೊಂಡರು. ಇದಕ್ಕೆ ನಗುತ್ತಾ ಉತ್ತರಿಸಿದ ಯತ್ನಾಳ್‌ ” ನಾನು ನೇರ ದಿಟ್ಟ ನಿರಂತರ” ಎಂದು ಹೇಳಿ ಮತ್ತೊಮ್ಮೆ ನಗುಬೀರಿದರು.

ಮಾತುಕತೆ ವಿಡಿಯೋಗಾಗಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here