ಪಂಚವಟಿಯಲ್ಲಿ ಹಿಂಜಾವೆ ರಾಜ್ಯ ಪ್ರಮುಖರ ಬೈಠಕ್

0

ಪುತ್ತೂರಿನಲ್ಲಿ ಹಿಂದುತ್ವದ ಕಟ್ಟೆ ಒಡೆಯದಂತೆ ಮಾತುಕತೆ ಸಾಧ್ಯತೆ !

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ಸಹಿತ 9 ಮಂದಿಗೆ ಪೊಲೀಸರು ದೌರ್ಜನ್ಯ ಎಸಗಿರುವ ಹಿನ್ನೆಯಲ್ಲಿ ಪುತ್ತೂರಿನಲ್ಲಿ ಹಿಂದುತ್ವಕ್ಕೆ ಭಾರಿ ತೊಂದರೆ ಆಗುವ ಕುರಿತು ಸಂಘ ಪರಿವಾರದೊಳಗೆ ಭಾರಿ ಚರ್ಚೆನಡೆಯುತ್ತಿದ್ದು, ಇದೀಗ ಬಿಜೆಪಿ ವಿಜಯಪುರ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಬಂದು ಹೋಗುತ್ತಿದ್ದಂತೆ ಪುತ್ತೂರು ಪಂಚವಟಿಯಲ್ಲಿ ಹಿಂದು ಜಾಗರಣ ವೇದಿಕೆ ರಾಜ್ಯದ ಪ್ರಮುಖರು ಪುತ್ತೂರು ಮತ್ತು ಜಿಲ್ಲಾ ಪ್ರಮುಖರೊಂದಿಗೆ ಬೈಠಕ್ ನಡೆಸುತ್ತಿದ್ದಾರೆ.


ಹಿಂದು ಜಾಗರಣ ವೇದಿಕೆ ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಉಲ್ಲಾಸ್, ಉಡುಪಿಯ ಪ್ರಕಾಶ್‌ರವರ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದ್ದು, ಪುತ್ತೂರು ಜಿಲ್ಲೆ, ಮತ್ತು ಪುತ್ತೂರು ತಾಲೂಕು ಪ್ರಮುಖರು ಬೈಠಕ್ ನಲ್ಲಿ ಪಾಲ್ಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here