ಆಸ್ಪತ್ರೆಗೆ ಭೇಟಿ ನೀಡಿದ ಯತ್ನಾಳ್ ಅವರಲ್ಲಿ ಅಳಲು ತೋಡಿಕೊಂಡ ಪುತ್ತಿಲ ಮತ್ತು ತಂಡ

0

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಲು ವಿಜಯಪುರ ನಗರ ಶಾಸಕ ಬಸವನ ಗೌಡ ಪಾಟೀಲ್ ನಗರದ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದರು.

ಈ ವೇಳೆ ಯತ್ನಾಳ್ ಅವರನ್ನು ಶಾಲು ಪೇಟ ತೊಡಿಸಿ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ಬಳಿಕ ಯತ್ನಾಳ್ ಆಸ್ಪತ್ರೆಯಲ್ಲಿ ಗಾಯಾಳು ಯುವಕರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಪುತ್ತಿಲ ಮತ್ತು ತಂಡ ಯತ್ನಾಳ್ ಅವರಿಗೆ ಮಾಹಿತಿ ನೀಡಿ ಸ್ವಾರ್ಥಕ್ಕಾಗಿ ಬಲಿ ಕೊಡುವ ಕೆಲಸ ನಡೆಯುತ್ತಿದೆ ಎಂದು ನೋವು ತೋಡಿಕೊಂಡರು. ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿಯೇ ಹೀಗಾದರೆ ಹೇಗೆ ಓಡಾಡೋದು, ನಮ್ಮವರೇ ಹೀಗೆ ಮಾಡಿದರೆ ಯಾರಲ್ಲಿ ನ್ಯಾಯ ಕೇಳಬೇಕು ಎಂದು ಅಳಲು ತೋಡಿಕೊಂಡರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here