ಆಲಂಕಾರಿನಲ್ಲಿ ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ

0

ಆಲಂಕಾರು: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿಯಾಗಿ ಡಿ. ಕೆ ಶಿವಕುಮಾರ್ ಹಾಗೂ ಕೆಲ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಲಂಕಾರು ಪೇಟೆಯಲ್ಲಿ ಕಾಂಗ್ರೆಸ್ ಪಾರ್ಟಿ ವತಿಯಿಂದ ಪಟಾಕಿ ಸಿಡಿಸಿ,ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ಕಾಂಗ್ರೇಸ್ ಪ್ರಮುಖರಾದ ರಾಧಾಕೃಷ್ಣ ರೈ ಪರಾರಿಗುತ್ತು, ಯತೀಶ್ ಬಾನಡ್ಕ, ಸುಬ್ರಹ್ಮಣ್ಯ ರಾವ್ ನಗ್ರಿ, ಗುರುಪ್ರಸಾದ್ ಆಲೆಕ್ಕಿ, ಆಬುಬಕ್ಕರ್ ನೆಕ್ಕರೆ,ಪೀರ್ ಮಹಮ್ಮದ್ ಸಾಹೇಬ್ ಆಲಂಕಾರು, ಗಣೇಶ್ ರೈ ಬೇಳ್ಪಾಡಿ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಅಬುಬಕ್ಕರ್ ಎನ್.ಎ, ಉಮೇಶ್ ಬುಡೇರಿಯಾ, ಉಮೇಶ್ ಕೊಪ್ಪ, ಹರೀಶ್ ನೆಕ್ಕರೆ,
ಸದಾನಂದ ಪೂಜಾರಿ ಮಡ್ಯೋಟ್ಟು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಸುರೇಶ್ ತೋಟಂತ್ತಿಲ, ಸೋಮಪ್ಪ ಪೂಜಾರಿ ನೆಕ್ಕರೆ, ರಮೇಶ್ ಕೊಂಡಾಡಿ, ಆನಂತಮುಲೆತ್ತಮಜಲು,ಶ್ರೀನಿವಾಸ ಮುಲೆತ್ತಮಜಲು,ದಿನೇಶ್ ಗಾಣಂತಿ, ಶೀವ ಶೇಡಿ,ಅಜರ್ ನೆಕ್ಕರೆ,ರಾಧಾಕೃಷ್ಣ ಗೌಡ ನಗ್ರಿ,ಮುತ್ತಪ್ಪ ಪಟ್ಟೆ,ವಿಶ್ವನಾಥ ಶರವೂರು,ದಯಾನಂದ ಆಚಾರ್ಯ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಯತೀಶ್ ಬಾನಡ್ಕ ಕಾಂಗ್ರೇಸ್ ಸರಕಾರ ನೀಡುತ್ತಿರುವ ಐದು ಗ್ಯಾರಂಟಿಗಳ ಬಗ್ಗೆ ತಿಳಿಸಿ ಶುಭಾಹಾರೈಸಿದರು,ಸದಾನಂದ ಪೂಜಾರಿ ಮಡ್ಯೋಟ್ಟು ಸ್ವಾಗತಿಸಿ,ಅಬುಬಕ್ಕರ್ ನೆಕ್ಕರೆ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here