ವಿಶ್ವನಾಥ ಪೂಜಾರಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಭಕ್ತಕೋಡಿ ನಿವಾಸಿಯಾಗಿದ್ದ ದಿನಸಿ ವ್ಯಾಪಾರಿ ವಿಶ್ವನಾಥ ಪೂಜಾರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಮೇ.20ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯಿತು.


ಗುಲ್ಬರ್ಗ ಆಕಾಶವಾಣಿ ಕೇಂದ್ರದ ಹಿರಿಯ ಸಂದರ್ಶಕ ಡಾ.ಸದಾನಂದ ಪೆರ್ಲ ಅವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್‌ ಸೊರಕೆ, ಸಿ.ಬಿ. ಐ. ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ , ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ್ ಎನ್.ಎಸ್.ಡಿ., ಜಯರಾಮ ಪೂಜಾರಿ ಶ್ರೀ ಕೋಟಿ ಚೆನ್ನಯ ಕುಕ್ಕುತ್ತಡಿ ದರ್ಬೆ , ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಆನಂದ ಪೂಜಾರಿ ಕಯ್ಯೊಂಕು, ನಾಣಿಲ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ವಸಂತ ಪೂಜಾರಿ ದಾಲಾರಿ, ಮೃತರ ಪತ್ನಿ ಗಾಯತ್ರಿ ಮಕ್ಕಳಾದ ಸಾಫ್ಟ್‌ವೇರ್ ಉದ್ಯೋಗಿ ಪ್ರತೀಕ್ , ಪೈನಾನ್ಸ್ ಉದ್ಯೋಗಿ ಹಾರ್ದಿಕ್ ಮತ್ತು ಸಿ.ಎ. ಕಛೇರಿಯಲ್ಲಿ ಉದ್ಯೋಗಿಯಾಗಿರುವ ಕು.ವಿಸ್ಮಿತಾ ಹಾಗೂ ಕುಟುಂಬಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here