ಕುಂತೂರು: ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ, ವಿಜಯೋತ್ಸವ

0

ಪೆರಾಬೆ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕುಂತೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.


ಕುಂತೂರುಪದವು, ಕುಂತೂರು, ಆಲಂಕಾರು ಮೂಲಕ ಸಾಗಿದ ಬೈಕ್ ರ್‍ಯಾಲಿ ಕೋಚಕಟ್ಟೆಯಲ್ಲಿ ಸಮಾಪ್ತಿಗೊಂಡಿತು. ಕಡಬ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರಾಯ್ ಅಬ್ರಹಾಂ, ಪೆರಾಬೆ-ಕುಂತೂರು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಶಾಜನ್ ವರ್ಗೀಸ್ ಅಗತ್ತಾಡಿ, ಪ್ರಧಾನ ಕಾರ್ಯದರ್ಶಿ ನೌಶಾದ್ ಎಂ., ಪೆರಾಬೆ 2ನೇ ಬೂತ್‌ನ ಅಧ್ಯಕ್ಷ ಅಬ್ದುಲ್ಲಾ ಕುಂಞಿ, ಸದಸ್ಯರಾದ ಸತ್ತಾರ್ ಯು.ಕೆ., ಕುಮಾರ್, ಅಶೋಕ್, ಅಫ್ತಾಝ್, ತಮೀಮ್, ನೌಫಾಲ್, ಅಮಾನ್, ರಫೀಕ್, ಬಶೀರ್ ಕೆ.ಪಿ., ಸುಂದರ, ಸಿಮಾಕ್, ಆಶೀರ್, ನಿಯಾಝ್, ನೌಫಾಲ್, ಸುಹೈಲ್, ತೋಮಸ್ ಕೆ.ಎಂ., ಮುಸ್ತಾಫ, ಲತೀಫ್,ಶಾಕೀರ್, ಫೌಝ್, ಶಿವ, ಶೋಬಿತ್, ಇಕ್ಬಾಕ್ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಸುಮಾರು ೨೦೦ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here