ಜೂನ್ 6 ರಂದು ಒಡಿಯೂರು ಶ್ರೀ ವಿವಿಧ ಬಳಗದ ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಬಳಗ , ವಜ್ರಮಾತಾ ಮಹಿಳಾ ಮಂಡಳಿ , ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಇವುಗಳ ಆಶ್ರಯದಲ್ಲಿ ಮಹೋತಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಹಯೋಗದೊಂದಿಗೆ ದೇವಾಲಯದ ಮುಂಭಾಗದ ನಟರಾಜ ವೇದಿಕೆ ಇಲ್ಲಿ ಜೂ.6 ರಂದು ಒಡಿಯೂರು ಶ್ರೀ ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ಸತ್ಯ ದತ್ತ ವೃತ ಪೂಜಾ ಕಾರ್ಯಕ್ರಮ ನಡೆಯಲಿದ್ದು , ಇದರ ಆಮಂತ್ರಣ ಬಿಡುಗಡೆಯು ಮೇ.26 ರಂದು ಹೊಟೇಲ್ ಲಕ್ಷ್ಮೀ ಇದರ ಸಭಾಂಗಣದಲ್ಲಿ ನಡೆಯಿತು.


ಗುರು ದೇವಾ ಸೇವಾ ಬಳಗದ ಗೌರವ ಸಲಹೆಗಾರ ಮೋನಪ್ಪ ಪೂಜಾರಿ ಸತ್ಯದತ್ತ ವೃತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ,ಶುಭ ಹಾರೈಸಿದರು. ಇನ್ನೋರ್ವ ಗೌರವ ಸಲಹೆಗಾರ ಜಯಪ್ರಕಾಶ್ ರೈ ,ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾ , ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ,ವಜ್ರಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ನಯನಾ ರೈ , ಗುರು ದೇವಾ ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ , ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ವ್ಯವಸ್ಥಾಪಕಿ ಪವಿತ್ರಪ್ರಸಾದ್ , ಗ್ರಾಮ ವಿಕಾಸ ಯೋಜನೆ ಇದರ ಸಿಬಂದಿ ಸುಶ್ಮಿತಾ ಹಾಗೂ ಲೆಕ್ಕ ಪರಿಶೋಧಕಿ ಹರ್ಷಿತಾ ಮೊದಲಾದವರು ಹಾಜರಿದ್ದರು. ಸತ್ಯಶಾಂತ ಪ್ರತಿಷ್ಠಾನದ ಶಾಂತಾ ಕುಂಟಿನಿ ಪ್ರಾರ್ಥನೆ ನೇರವೇರಿಸಿ , ಸುಧೀರ್ ನೊಂಡಾ ವಂದಿಸಿದರು.

LEAVE A REPLY

Please enter your comment!
Please enter your name here