ಯಕ್ಷರಂಗದ ದಿಗ್ಗಜ ದಿ.ಡಾ ಶ್ರೀಧರ್ ಭಂಡಾರಿಯವರ ಯಕ್ಷದೇಗುಲ ನಿವಾಸಕ್ಕೆ ಪುತ್ತಿಲ ಭೇಟಿ

0

ಪುತ್ತೂರು: ಯಕ್ಷರಂಗದ ದಿಗ್ಗಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಧರ್ ಭಂಡಾರಿಯವರ ಯಕ್ಷ ದೇಗುಲ ನಿವಾಸಕ್ಕೆ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಭಂಡಾರಿಯವರ ಪತ್ನಿ ಉಷಾ ಭಂಡಾರಿಯವರ ಆಶೀರ್ವಾದವನ್ನು ಪಡೆದರು.

ಪುತ್ತೂರು ಶ್ರೀಧರ್ ಭಂಡಾರಿಯವರ ಅಳಿಯ ಮಹಾರಾಷ್ಟ್ರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಸಮಾಜ ಸೇವಕ, ಹಿಂದುತ್ವವಾದಿ ಸಚ್ಚಿದಾನಂದ್ ಶೆಟ್ಟಿಯವರು ಮತ್ತು ಪುತ್ತಿಲರು ಕಳೆದ ಹದಿನೈದು ವರ್ಷಗಳಿಂದ ಆತ್ಮೀಯರಾಗಿದ್ದರು.

ಭೇಟಿಯ ಸಂದರ್ಭದಲ್ಲಿ ಸಚ್ಚಿದಾನಂದ್ ಶೆಟ್ಟಿಯವರು ಮತ್ತು ಶ್ರೀಧರ್ ಭಂಡಾರಿಯವರ ಸುಪುತ್ರ ದೇವಿಪ್ರಕಾಶ್ ಭಂಡಾರಿ, ಸೊಸೆ ಅರ್ಚನಾ ಭಂಡಾರಿ ಮಕ್ಕಳಾದ ಶಾಂತಲಾ ಸಚ್ಚಿದಾನಂದ್ ಶೆಟ್ಟಿ, ಅನಿಲ ದೀಪಕ್ ಶೆಟ್ಟಿ ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದು ಪುತ್ತಿಲರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶಾಲು ಹೊದೆಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here