ಪಾಣಾಜೆ: ಆರ್‌ಎಸ್‌ಎಸ್ ಸ್ವಯಂ ಸೇವಕರಿಂದ, ಸೇವಾ ಸಾಂಘಿಕ್ ಒಂಟಿ ಜೀವಿ ಕೃಷ್ಣ ಮಣಿಯಾಣಿರವರ ಮನೆ ದುರಸ್ತಿ

0

ಪಾಣಾಜೆ: ಪಾಣಾಜೆಯ ದೇವಸ್ಯದಲ್ಲಿರುವ ಒಬ್ಬಂಟಿಗ ನಿವಾಸಿಯಾದ ಕೃಷ್ಣ ಮಣಿಯಾಣಿ ಇವರ ಮನೆಯು ಶಿಥಿಲಗೊಂಡಿದ್ದು ವಾಸ ಮಾಡಲು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬೆಟ್ಟಂಪಾಡಿ ಮಂಡಲದ ಸ್ವಯಂ ಸೇವಕರು ಸೇವಾ ಭಾರತಿ ಆಯಾಮದಲ್ಲಿ ಸೇವಾ ಸಂಘಿಕ್ ಕಾರ್ಯಕ್ರಮದ ಮೂಲಕ ಮೇ.28 ರಂದು ಮನೆಯನ್ನು ಸಂಪೂರ್ಣ ದುರಸ್ತಿಗೊಳಿಸಿ ವಾಸಯೋಗ್ಯವಾಗಿ ಮಾಡಿಕೊಟ್ಟರು.

ಉಪ್ಪಳಿಗೆ, ಬೆಟ್ಟಂಪಾಡಿ ಹಾಗೂ ಪಾಣಾಜೆ ಗ್ರಾಮದ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಶಿಥಿಲ ಹೊಂದಿದ್ದ ಮನೆಯ ಮಾಡನ್ನು ಸಂಪೂರ್ಣ ದುರಸ್ತಿ ಮಾಡಿ ಪುನರ್ ನಿರ್ಮಾಣ ಮಾಡಲಾಯಿತು. ಸಂಘದ ಸ್ವಯಂ ಸೇವಕರು ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮ ಮಾಡಿ ಶ್ಲಾಘನೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here