ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಲೀಲಾವತಿ ಪಿ.ಹೆಚ್.ನಿಧನ

0

ನೆಲ್ಯಾಡಿ: ಕೊಣಾಲು ಗ್ರಾಮದ ಹೊಸಮನೆ ಮಹಾಲಕ್ಷ್ಮಿ ನಿವಾಸಿ ಪ್ರಭಾನಂದ ಗೌಡರವರ ಪತ್ನಿ ಶ್ರೀಮತಿ ಲೀಲಾವತಿ ಪಿ.ಹೆಚ್.(53ವ.)ರವರು ಅಲ್ಪಕಾಲಸ ಅಸೌಖ್ಯದಿಂದ ಮೇ.29ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಲೀಲಾವತಿ ಅವರು ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯೆಯಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಪ್ರಭಾನಂದ ಗೌಡ, ಪುತ್ರಿಯರಾದ ಶ್ರೀಮತಿ ರಶ್ಮಿ, ಶ್ರೀಮತಿ ಪುನೀತಾ, ಶ್ರೀಮತಿ ಪ್ರತಿಭಾ, ಪುತ್ರ ಕಿರಣ್ ಹೆಚ್., ಅಳಿಯಂದಿರಾದ ದಿನೇಶ್ ದೇವಸ್ಯ, ಸಂತೋಷ್ ಸವಣಾಲು, ಸೊಸೆ ಶ್ರೀಮತಿ ಚಿಂತನಾ, ಮೊಮ್ಮಕ್ಕಳಾದ ನಿವಿತ್ ದೇವಸ್ಯ, ಲಕ್ಷ್ ದೇವಸ್ಯ, ಪ್ರಗ್ಯಾನ್ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೊಣಾಲು-ಆರ್ಲ ಹಾ.ಉ.ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಟೇರಿ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸುಪ್ರಿತಾರವಿಚಂದ್ರ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಕೆರ್ನಡ್ಕ, ನೋಣಯ್ಯ ಗೌಡ ಡೆಬ್ಬೇಲಿ, ಶಾಖಾ ವ್ಯವಸ್ಥಾಪಕ ವಿನೋದ್‌ರಾಜ್, ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ರವಿಚಂದ್ರ ಹೊಸವೊಕ್ಲು, ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಲೈನಾ ಜೋಬಿನ್, ಹಾಲು ಪರೀಕ್ಷಕಿ ಪ್ರಜಲ, ನಿರ್ದೇಶಕರು ಸೇರಿದಂತೆ ಹಲವು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here