ಕೊಕ್ಕಡ- ಜೇಸಿಐ ವಿಶೇಷ ತರಬೇತಿ ದಿನಾಚರಣೆ-ಯುವ ಜೇಸಿ ಮಾರ್ಗದರ್ಶನ ತರಬೇತಿ

0

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ವಿಶೇಷ ತರಬೇತಿ ದಿನಾಚರಣೆ ನಡೆಸಲಾಯಿತು.


ಮೇ.28ರಂದು ನಿಡ್ಲೆ ಬಳಿ ಆನಂದ ರೆಸಾರ್ಟ್‌ನಲ್ಲಿ ಜರುಗಿದ ಯುವ ಜೇಸಿಗಳಿಗೆ ’ಗೈಡಡ್ ಬೈ ಪರ್ಪೋಸ್’ ಎಂಬ ತರಬೇತಿ ಶಿಬಿರವನ್ನು ವಲಯ 15 ಯುವ ಜೇಸಿ ವಿಭಾಗದ ನಿರ್ದೇಶಕರಾದ ಶ್ರೀಮತಿ ಸ್ವಾತಿ ಜಗನ್ನಾಥ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ತರಬೇತುದಾರ ಶಂಕರ್ ರಾವ್ ಅವರು ತರಬೇತಿ ನೀಡಿದರು. ಕೊಕ್ಕಡ ಜೇಸಿ ಅಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಯುವ ಜೇಸಿಗಳಾದ ಹರ್ಷಿತಾ, ಅನನ್ಯ ಕ್ರಮವಾಗಿ ಉದ್ಘಾಟಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ
ಪರಿಚಯ ಮಾಡಿದರು. ಸಾತ್ವಿಕ್, ನಿಶಿತಾ, ಅನನ್ಯ ಶಿಬಿರಾರ್ಥಿಗಳ ಪರವಾಗಿ ಅನಿಸಿಕೆ ತಿಳಿಸಿದರು. ಯುವ ಜೇಸಿ ಶ್ರವಣ್‌ರವರು ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ್ ರಾವ್, ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ., ಸದಸ್ಯರಾದ ರಾಜಾರಾಮ, ಜೆಸಿಂತಾ ಡಿ ಸೋಜ, ಮನೋರಮಾ, ಜೋಸೆಫ್ ಪಿರೇರಾ, ಉಪಾಧ್ಯಕ್ಷರಾದ ಯು. ನರಸಿಂಹ ನಾಯಕ್, ಕೋಶಾಧಿಕಾರಿ ಜಸ್ವಂತ್ ಪಿರೇರಾ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here