ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎ.ಜಗನ್ನಾಥ ಶೆಟ್ಟಿ ಮೆ.31 ರಂದು ಸೇವಾ ನಿವೃತ್ತಿ

0

ಆಲಂಕಾರು: ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶ್ರೀ ಎ.ಜಗನ್ನಾಥ ಶೆಟ್ಟಿಯವರು ನಾಳೆ ಮೇ .31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಜಗನ್ನಾಥ ಶೆಟ್ಟಿಯವರು ಕಡೇಶಿವಾಲಯ ಅಮೈಯಲ್ಲಿ ಶ್ರೀ ರಾಮಣ್ಣ ಶೆಟ್ಟಿ ಮತ್ತು ಶ್ರೀಮತಿ ತುಂಗಮ್ಮ ಶೆಡ್ತಿಯವರ ತೃತೀಯ ಪುತ್ರನಾಗಿ 1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದ.ಕ .ಜಿ.ಪ ಹಿ.ಪ್ರಾ ಶಾಲೆ ಕಡೇಶಿವಾಲಯದಲ್ಲಿ, ಪ್ರೌಡ ಶಿಕ್ಷಣ ಹಾಗೂ ಪಿ.ಯು.ಸಿ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜ್ ಬೆಳ್ಳಾರೆಯಲ್ಲಿ ಪಡೆದು ,ಪದವಿ ಶಿಕ್ಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಉಪ್ಪಿನಂಗಡಿಯಲ್ಲಿ ಮುಗಿಸಿದರು.

1987 ರಲ್ಲಿ ಪಂಚಾಯತ್ ರಾಜ್ ಇಲಾಖಾ ಸೇವೆಗೆ ಸೇರಿ, ಪೆರ್ನೆ ಹಾಗೂ ಕಡೇಶಿವಾಲಯ ಗ್ರಾಮ ಪಂಚಾಯತ್ ನಲ್ಲಿ 11 ವರ್ಷಗಳ ಸೇವೆ ಸಲ್ಲಿಸಿ, 1998 ರಲ್ಲಿ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿ ರಾಮಕುಂಜ ಗ್ರಾ.ಪಂ ,ಕೋಡಿಂಬಾಡಿ ಗ್ರಾ.ಪಂ. ಗಳಲ್ಲಿ ಸೇವೆ ಸಲ್ಲಿಸಿ, 2010ರಲ್ಲಿ ಸವಣೂರು ಗ್ರಾ.ಪಂ ಗೆ ಗ್ರೇಡ್ 1 ಕಾರ್ಯದರ್ಶಿ ಯಾಗಿ ಮುಂಭಡ್ತಿ ಹೊಂದಿ 2013 ರಲ್ಲಿ ಆಲಂಕಾರು ಗ್ರಾ.ಪಂ ಗೆ ಅಭಿವೃದ್ದಿ ಅಧಿಕಾರಿಯಾಗಿ ಸೇವೆಗೆ ನಿಯೋಜನೆಗೊಂಡು ಒಟ್ಟು 36 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಮೇ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಜಗನ್ನಾಥ ಶೆಟ್ಟಿಯವರ ಪತ್ನಿ ಶ್ರೀಮತಿ ಉದಯ ಚಂದ್ರಿಕಾ, ಮಗ ಡಾ. ಅಭಿಷೇಕ್ ಎ.ಶೆಟ್ಟಿ , MBBS. ಪದವೀಧರರು, ಮಗಳು ಅಪೂರ್ವಾ ಎ.ಜೆ.ಶೆಟ್ಟಿ M.S.ಪದವೀಧರೆಯಾಗಿ, ಅಮೇರಿಕಾದಲ್ಲಿ ಉದ್ಯೋಗಿಯಾಗಿದ್ದು,ಪೆರಾಬೆ ಗ್ರಾಮದ ಮನವಳಿಕೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here