ಮೇ.31 ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ಮೋಟಾರು ನಿರೀಕ್ಷಕ ಶ್ರೀಧರ ರಾವ್ ನಿವೃತ್ತಿ

0

ಪುತ್ತೂರು:ಪ್ರಾದೇಶಿಕ ಸಾರಿಗೆ ಇಲಾಖೆಗೆ ಪುತ್ತೂರು ಕಚೇರಿಯಲ್ಲಿ ಹಿರಿಯ ಮೋಟಾರು ನಿರೀಕ್ಷಕರಾಗಿದ್ದ ಶ್ರೀಧರ ರಾವ್‌ರವರು ಮೇ.೩೧ರಂದು ನಿವೃತ್ತರಾಗಲಿದ್ದಾರೆ.
1991ರಲ್ಲಿ ಮೋಟಾರು ನಿರೀಕ್ಷಕರಾಗಿ ಇಲಾಖೆಗೆ ನೇಮಕಗೊಂಡು ಬೆಂಗಳೂರು, ಹಾಸನ, ಉಡುಪಿ, ಹಾಸನ, ಚಿತ್ರದುರ್ಗ ಉಡುಪಿ, ಮಂಗಳೂರು ಹಾಗೂ ಪುತ್ತೂರು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

2016ರಲ್ಲಿ ಹಿರಿಯ ಮೋಟಾರು ನಿರೀಕ್ಷಕರಾಗಿ ಪದೋನ್ನತಿ ಪಡೆದು ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ತನ್ನ ಸೇವಾವಧಿಯಲ್ಲಿ 2019ರಲ್ಲಿ ಪುತ್ತೂರು ಕಚೇರಿಯಲ್ಲಿ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಹಾಗೂ ಉಡುಪಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸಿದ್ದರು. ಪತ್ನಿ ಗೃಹಿಣಿ ಸುಜಿತಾ ರಾವ್, ಪುತ್ರ ಆಸ್ಟ್ರೇಲಿಯಾದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಉದ್ಯೋಗದಲ್ಲಿರುವ ಕೀರ್ತನ್ ಹಾಗೂ ಪುತ್ರಿ ಎಂಬಿಬಿಎಸ್ ಪದವೀಧರೆ ಸಂಸ್ಕೃತಿಯವರೊಂದಿಗೆ ಮಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here