ಜೂ.18: ಪುತ್ತೂರು ಬಂಟರ ಸಂಘದಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅದ್ದೂರಿ ಸನ್ಮಾನ

0

ಪುತ್ತೂರು: ಪುತ್ತೂರಿನ ನೂತನ ಶಾಸಕರಾಗಿ ಆಯ್ಕೆಗೊಂಡ ಅಶೋಕ್ ಕುಮಾರ್ ರೈಯವರಿಗೆ ತಾಲೂಕು ಬಂಟರ ಸಂಘದ ವತಿಯಿಂದ ಅದ್ದೂರಿಯ ಸನ್ಮಾನವನ್ನು ಜೂ.18 ರಂದು ಬೆಳಿಗ್ಗೆ 11:30ಕ್ಕೆ ಪುತ್ತೂರು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಸಲು ಜೂ.2ರಂದು ನಡೆದ ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ತಿರ್ಮಾನಿಸಲಾಯಿತು.


ಬಂಟ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ-ಶಶಿಕುಮಾರ್ ರೈ ಬಾಲ್ಯೊಟ್ಟ
ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಬಂಟ ಸಮಾಜದ ಅಶೋಕ್‌ಕುಮಾರ್ ರೈಯವರು ಪುತ್ತೂರಿನ ಶಾಸಕರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಬಂಟ ಸಮಾಜದ ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದ್ದು, ಇದು ಬಂಟ ಸಮಾಜಕ್ಕೆ ಗೌರವ ತರುವ ಕೆಲಸವಾಗಿದ್ದು, ಅಶೋಕ್‌ಕುಮಾರ್ ರೈಯವರ ಸನ್ಮಾಶ ಸಮಾರಂಭದಲ್ಲಿ ಬಂಟ ಸಮಾಜ ಭಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಬಂಟ ಸಮಾಜದ ಕರ್ತವ್ಯ- ಕಾವು ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಅಶೋಕ್‌ಕುಮಾರ್ ರೈಯವರನ್ನು ಪಕ್ಷಭೇದ ಬಿಟ್ಟು ಬಂಟ ಸಮಾಜದ ಪ್ರತಿಯೊಬ್ಬರು ಗೌರವಿಸುವುದು ಕರ್ತವ್ಯವಾಗಿದ್ದು, ಪುತ್ತೂರಿನ ಅಭಿವೃದ್ಧಿಯ ಚಿಂತಕ ಅಶೋಕ್ ಕುಮಾರ್ ರೈಯವರಿಂದ ಪುತ್ತೂರು ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.

ಯಶಸ್ಸುಗೊಳಿಸೋಣ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಅಶೋಕ್‌ಕುಮಾರ್ ರೈ ಸನ್ಮಾನ ಸಮಾರಂಭ ಬಂಟ ಸಮಾಜದ ಸಂಭ್ರಮದ ಕ್ಷಣವಾಗಬೇಕು ಎಲ್ಲರೂ ಒಟ್ಟಾಗಿ ಕಾರ್‍ಯಕ್ರಮ ಯಶಸ್ಸುಗೊಳಿಸೋಣ ಎಂದರು.

ಅರ್ಥಪೂರ್ಣವಾಗಿ ನಡೆಯಲಿ-ಬೂಡಿಯಾರ್ ರಾಧಾಕೃಷ್ಣ ರೈ
ಪುತ್ತೂರು ತಾಲೂಕು ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಬಂಟಸಮಾಜದಲ್ಲಿ ನಾವೆಲ್ಲ ಒಂದೇ, ಇಲ್ಲಿ ಯಾವುದೇ ರಾಜಕೀಯ ಇಲ್ಲ, ಅಶೋಕ್‌ಕುಮಾರ್ ರೈಯವರು ಶಾಸಕರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಬಂಟರ ಸಂಘದಿಂದ ಸನ್ನಾನಿಸುವ ಕಾರ್‍ಯಕ್ರಮ ಅರ್ಥಪೂರ್ಣವಾಗಿ ನಡೆಯಲಿ ಎಂದರು.
ಸಭೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳು, ತಾಲೂಕು ಸಮಿತಿ ಸಹಸಂಚಾಲಕರು, ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಯನ್ನು ನೀಡಿದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು.

LEAVE A REPLY

Please enter your comment!
Please enter your name here