ಪುತ್ತೂರು ಶಾಸಕರಿಗೆ ಕಲಿಯುಗ ಸೇವಾ ಸಮಿತಿಯಿಂದ ಅಭಿನಂದನೆ

0

ಪುತ್ತೂರು : ನೂತನವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ಅವರಿಗೆ ಕಲಿಯುಗ ಸೇವಾ ಸಮಿತಿ ವತಿಯಿಂದ ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು.

ಪುತ್ತೂರು ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜನರ ಅನೇಕ ಸಮಸ್ಯೆಗಳಿಗೆ ನಿಮ್ಮ ಅಧಿಕಾರಾವಧಿಯಲ್ಲಿ ಪರಿಹಾರ ಸಿಗಲಿ ಎಂದು ಹಾರೈಸಿದ ಸಮಿತಿ, ಸಾರ್ವಜನಿಕರ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸತೀಶ್ ರೈ, ಗಣೇಶ್ ಆಚಾರ್ಯ, ಸುರೇಂದ್ರ ಪೂಜಾರಿ, ಪದ್ಮನಾಭ ಪ್ರಭು, ಸಂಪತ್ ಕುಮಾರ್ ಜೈ ಮತ್ತು ಲಿಗೋರಿ ಸೆರವೋ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here