60 ಸಾವಿರವರೆಗಿನ ಕೊಡುಗೆಗಳು..; ಭಾರತ್ – ಮಾರುತಿ ಸಹಭಾಗಿತ್ವದ ಗ್ರಾಮೀಣ ಮಹೋತ್ಸವ ಇಂದು (ಜೂ.8) ಕೊನೆ

0

ಪುತ್ತೂರು: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝಕಿ ಇಂಡಿಯಾ ತನ್ನ ಪ್ರಮುಖ ಡೀಲರ್, ಹಾರಾಡಿ ಬಳಿಯಿರುವ ಭಾರತ್ ಅಟೋಕಾರ್ಸ್ ಜತೆಯಾಗಿ, ಕಾರು ಪ್ರಿಯರನ್ನು ಆಕರ್ಷಿಸಲು 2 ದಿನಗಳ ಬೃಹತ್ ಗ್ರಾಮೀಣ ಮಹೋತ್ಸವವನ್ನು ಜೂ.7ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪ್ರಾರಂಭಿಸಿದೆ. ವಿನೂತನ ಕಾರುಗಳ ಪ್ರದರ್ಶನ, ಕಡಿಮೆ ಬಡ್ಡಿಯ ದರದಲ್ಲಿ, ಶೀಘ್ರ ಸಾಲ ಸೌಲಭ್ಯ ಯಾವುದೇ ಮಾದರಿಯ ಹಳೇ ಕಾರುಗಳನ್ನು ನೂತನ ತಂತ್ರಜ್ಞಾನವನ್ನೊಳಗೊಂಡ ಕಾರಿನೊಡನೆ ಬದಲಾಯಿಸೋ ಅವಕಾಶ ಇರಲಿದ್ದು ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ. ಗ್ರಾಹಕರು ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 60 ಸಾವಿರವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು, ಜೂ.8ರಂದು ಕಾರುಗಳ ಹಬ್ಬಕ್ಕೆ ತೆರೆ ಬೀಳಲಿದೆ. ಗ್ರಾಹಕ ಜನತೆ ಇದರ ಲಾಭ ಪಡೆಯುವಂತೆ ಟೀಮ್ ಲೀಡರ್ ಜಯರಾಜ್ ವಿನಂತಿಸಿದ್ದಾರೆ.

ಯಾವುದರಲ್ಲಿ ಎಷ್ಟು ಉಳಿತಾಯ..?

ಅಲ್ಟೋ ಕೆ10., ಎಸ್. ಪ್ರೆಸ್ಸೋ-60 ಸಾವಿರ. ಸೆಲೆರಿಯೋ-57 ಸಾವಿರ ಇಕೋ- 5೦,5೦೦ ಸ್ವಿಫ್ಟ್ -57,1೦೦ ಡಿಸೈರ್-13ಸಾವಿರ ವಿಚಾರಣೆಗಾಗಿ :9483501730, 8277495730 ಸಂಪರ್ಕಿಸಿ.

LEAVE A REPLY

Please enter your comment!
Please enter your name here