ಆಹಾರ ಇಲಾಖಾ ಸರ್ವರ್ ನಿರ್ವಹಣಾ ಕಾರ್ಯ ಹಿನ್ನಲೆ – ಜೂ.27ರೊಳಗೆ ಪಡಿತರ ಪಡೆದು ಕೊಳ್ಳಲು ಸೂಚನೆ

0

ಪುತ್ತೂರು: ಜೂ.28ರಿಂದ ಆಹಾರ ಇಲಾಖಾ ಸರ್ವರ್ ನಿರ್ವಹಣಾ ಕಾರ್ಯವನ್ನು ಇಲಾಖೆಯು ಕೈಗೊಂಡಿರುವುದರಿಂದ ಪಡಿತರ ಚೀಟಿದಾರರು ಜೂನ್ 2023ನೇ ತಿಂಗಳ ಪಡಿತರವನ್ನು ಜೂ.27ರೊಳಗೆ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಲು ಸೂಚಿಸಿದೆ. ತದ ನಂತರ ಜೂನ್ ಮಾಹೆಯ ಪಡಿತರವನ್ನು ವಿತರಿಸಲು ಅವಕಾಶವಿರುವುದಿಲ್ಲ. ಆದುದರಿಂದ ಪಡಿತರ ಚೀಟಿದಾರರು 27ನೇ ತಾರೀಖಿನವರೆಗೆ ಕಾಯದೇ ಸಾಧ್ಯವಾದಷ್ಟು ಶೀಘ್ರ ಪಡಿತರ ಪಡೆಯುವಂತೆ ತಹಶೀಲ್ದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here