ಮುಕ್ರಂಪಾಡಿ ಧರ್ಮಶ್ರೀ ವಠಾರದ ಭಕ್ತರಿಂದ ಸರ್ಪ ಸಂಸ್ಕಾರ

0

ಪುತ್ತೂರು: ಮುಕ್ರಂಪಾಡಿ ಧರ್ಮಶ್ರೀ ವಠಾರದಲ್ಲಿ ಮೇ.29 ರಂದು ಮೃತಪಟ್ಟ ನಾಗರಾಜನ ಸರ್ಪಸಂಸ್ಕಾರ ಕಾರ್ಯಕ್ರಮ ಮೊಟ್ಟೆತ್ತಡ್ಕ ರಕ್ತೇಶ್ವರಿ ಗುಡಿಯಲ್ಲಿ ಜೂ.18 ರಂದು ಪುರೋಹಿತರಾದ ಮಿತ್ತೂರು ನರಸಿಂಹ ಭಟ್, ರಾಜನಾರಾಯಣ ಉರ್ಲಾಂಡಿ, ದುರ್ಗಾಭಿರಾಮ ಭಟ್ ಹಾಗೂ ಅನಂತ ಕೃಷ್ಣ ಭಟ್ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.

ಪೂಜಾ ಕಾರ್ಯಕ್ರಮದ ತರುವಾಯ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಕಾಶ್ ಮುಕ್ರಂಪಾಡಿ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಸುಜಿತ್ ರೈ ,ವಿಷ್ಣು ಭಟ್, ದಿನಕರ ರಾವ್, ಶ್ರೀಪಾದ, ಜಯರಾಮ ರೈ, ವಸಂತ ನಾಯಕ್,ವಸಂತ ರೈ,ಚಂದ್ರಹಾಸ, ರಾಜಾರಾಮ್ ಭಟ್,ಅರುಣ್ ಕೃಷ್ಣ, ಅನಿಲ್ ಶ್ರೀನಿವಾಸ,ಗಂಗಾಧರ್ ನಾಯಕ್,ಚಂದ್ರಹಾಸ ರೈ,ಗಂಗಾಧರ್, ಈರಣ್ಣ,ಪ್ರಜ್ವಲ್ ಯಶೋದ ಶಶಿಧರ್,ವಾರಿಜಾ ಗೋಪಾಲ್, ಜೊತ್ಸ್ನಾ ನಾಯಕ್, ಸೇರಿದಂತೆ ಧರ್ಮಶ್ರೀ ವಠಾರದವರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು .ಸಾರ್ವಜನಿಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here