ಪುಣಚ: ಆಜೇರು ಶಾಲಾ ಶಿಕ್ಷಕಿ ಸೀತಾಲಕ್ಷ್ಮೀಗೆ ಅಭಿನಂದನಾ ಕಾರ್ಯಕ್ರಮ

0

ಶಾಲಾ ಅವಶ್ಯಕತೆಗಳಿಗೆ ರೂ.25 ಸಾವಿರ ಕೊಡುಗೆ


ಪುತ್ತೂರು: ಪುಣಚ ಗ್ರಾಮದ ಆಜೇರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿಯಾದ ಸೀತಾಲಕ್ಷ್ಮೀಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಇವರು ಶಿಕ್ಷಕಿಯಾಗಿ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಯಸ್ ಡಿ ಯಂ ಸಿ ಅಧ್ಯಕ್ಷ ವೆಂಕಟ್ರಮಣರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ನಿವೃತ ಮುಖ್ಯಶಿಕ್ಷಕ ಆಜೇರು ಶ್ರೀಪತಿ ನಾಯಕ್ ಅಭಿನಂದನಾ ನುಡಿಗಳನ್ನಾಡಿದರು. ಸೀತಾಲಕ್ಷ್ಮೀಯವರಿಗೆ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೀತಾಲಕ್ಷ್ಮೀಯವರು ವೃತ್ತಿ ಜೀವನದ ಅನುಭವಗಳನ್ನು ನೆನಪಿಸಿಕೊಂಡು ಶಾಲೆಯ ಅವಶ್ಯಕತೆಗಳಿಗಾಗಿ ರೂ25000 ವನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮಕ್ಕಳು, ಹಿರಿಯವಿದ್ಯಾರ್ಥಿಗಳು. ಎಸ್‌ಡಿಎಂಸಿ ಸದಸ್ಯರು. ಶಾಲಾಹಿತೈಷಿಗಳು ನಿವೃತ್ತರ ಬಗ್ಗೆ ಮಾತನಾಡಿದರು. ಸಹ ಶಿಕ್ಷಕಿ ಗೀತಾ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕ ಆಜೇರು ಸುರೇಶ ನಾಯಕ್ ವಂದಿಸಿದರು. ಮಕ್ಕಳ ಪೋಷಕರು, ಅಂಗನವಾಡಿ ಮಕ್ಕಳು ಮತ್ತು ಅಂಗನವಾಡಿ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here