ರಾಜಧಾನಿಯಲ್ಲಿ “ಸರ್ಕಸ್”….

0

ಪುತ್ತೂರು: ತುಳುನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ರೂಪೇಶ್ ಶೆಟ್ಟಿ ಅಭಿನಯದ ತುಳು ಸರ್ಕಸ್ ಚಿತ್ರ ಇದೇ ಗುರುವಾರದಂದು‌ ರಾಜಧಾನಿ ಬೆಂಗಳೂರಿನಲ್ಲಿ ತೆರೆಕಾಣಲಿದೆ. ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ನ ಐನಾಕ್ಸ್ ಥಿಯೇಟರ್ ನಲ್ಲಿ ಸಂಜೆ 7ರ ಶೋನಲ್ಲಿ ಈ ಚಿತ್ರದ ಸಂಪೂರ್ಣ ತಾರಾಗಣವು ಆಗಮಿಸಿ ಚಿತ್ರದ ಯಶಸ್ಸನ್ನು ಸಂಭ್ರಮಿಸಲಿದೆ ಎಂದು ಬೆಂಗಳೂರಿನ ಕೋಸ್ಟಲ್ ಸ್ಟಾರ್ಸ್‌ ತಂಡದ ಸತೀಶ್ ರೈ ನೀರ್ಪಾಡಿ ತಿಳಿಸಿದ್ದಾರೆ. ಗೋಪಾಲ್ ಪೂಜಾರಿ ಪಟ್ಟೆ , ಜಯ್ ರೈ ಮುನಿಯೂರು , ಪಳ್ಳಿ ವಿಶ್ವನಾಥ ಶೆಟ್ಟಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ತುಳುವರು ಸರ್ಕಸ್ ನ ರಿಲೀಸ್ ನ ಆಯೋಜಕರಾಗಿದ್ದಾರೆ.

LEAVE A REPLY

Please enter your comment!
Please enter your name here