ಪುತ್ತೂರು : ಜುಲೈ 2ರಂದು ಸಂಜೆ ಗಂಟೆ 6.30 ರಿಂದ ಸ್ಟಾರ್ ಸುವರ್ಣ ಚಾನಲ್ನಲ್ಲಿ ಪ್ರಸಾರವಾಗುವ ಪ್ರಜಾವಾಣಿ ಸಿನಿ ಸನ್ಮಾನ ಕಾರ್ಯಕ್ರಮ ದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾರಥ್ಯದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ದಲ್ಲಿ ಅವರ ಜೊತೆಗೆ ಪುತ್ತೂರಿನ ಖ್ಯಾತ ಗಾಯಕ ನಿಶಾನ್ ರೈ ಮಠಂತಬೆಟ್ಟು ಹಾಡಲಿದ್ದಾರೆ.
ಸುಮಾರು ಒಂದೂವರೆ ವರ್ಷಗಳಿಂದೀಚೆಗೆ ಬೆಂಗಳೂರಿನಲ್ಲಿ ಅರ್ಜುನ್ ಜನ್ಯ ಜೊತೆಗೆ ಸಂಗೀತ ನಿರ್ದೇಶಕನಾಗುವ ನಿಟ್ಟಿನಲ್ಲಿ ಅವರಿಂದ ತರಬೇತಿಯನ್ನು ಪಡೆಯುತ್ತಿರುವ ನಿಶಾನ್ ಅವರ ಸಂಗೀತ ನಿರ್ದೇಶನ ದಲ್ಲಿ ಈಗಾಗಲೇ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಚಂದನವನದ ಖ್ಯಾತ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ
ಚಿಕ್ಕಂದಿನಿಂದಲೇ ಕೀ|ಶೇ ಚಿದಾನಂದ ಕಾಮತ್ರ ಬಾರಿಸು ಕನ್ನಡ ಡಿಂಡಿಮ ತಂಡದಲ್ಲಿ ಗುರುತಿಸಿಕೊಂಡಿದ್ದ ನಿಶಾನ್ ಸದ್ಯ ಅರ್ಜುನ್ ಜನ್ಯ ತಂಡದ ಲೈವ್ ಶೋ ಗಳಲ್ಲಿ ಕೂಡಾ ಹಾಡುಗಾರನಾಗಿ ಕರ್ನಾಟಕದಾದ್ಯಂತ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇವರು ಬಾಲ್ಯೋಟ್ಟು ಗುತ್ತು ಕರುಣಾಕರ ರೈ ಮತ್ತು ನಿರತ ಕೆ ರೈ ಮಠಂತಬೆಟ್ಟು ಇವರ ಪುತ್ರ.