ಏಣಿತ್ತಡ್ಕ: ತಂತಿ ಮೇಲೆ ಬಿದ್ದಿದ್ದ ಗೆಲ್ಲು ತೆರವು ವೇಳೆ ವಿದ್ಯುತ್ ಶಾಕ್, ಗಾಯ

0

ರಾಮಕುಂಜ: ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಗೆಲ್ಲು ತೆರವು ವೇಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಕೊಯಿಲ ಗ್ರಾಮದ ಏಣಿತ್ತಡ್ಕದಲ್ಲಿ ಜು.2ರಂದು ರಾತ್ರಿ ನಡೆದಿದೆ.


ಪುತ್ತೂರಿನಿಂದ ಕೊಯಿಲ ಏಣಿತ್ತಡ್ಕ ಮೂಲಕ ಕಡಬಕ್ಕೆ ಹಾದುಹೋಗಿರುವ 33 ಕೆ.ವಿ.ಹೆಚ್‌ಟಿ ಲೈನ್ ನಿರ್ವಹಣೆ ಮಾಡುತ್ತಿದ್ದ ಕುಂದಾಪುರ ಮೂಲದ ರವೀಂದ್ರ(30ವ.)ಗಾಯಗೊಂಡವರಾಗಿದ್ದಾರೆ. ಜು.2ರಂದು ರಾತ್ರಿ ವೇಳೆ ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ವಿದ್ಯುತ್ ತಂತಿ ಮೇಲೆ ಮರದ ಗೆಲ್ಲೊಂದು ಬಿದ್ದ ಪರಿಣಾಮ ಟ್ರಿಪ್ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ರವೀಂದ್ರ ಅವರು ಕೊಕ್ಕೆಯ ಸಹಾಯದಿಂದ ವಿದ್ಯುತ್ ತಂತಿ ಮೇಲಿದ್ದ ಗೆಲ್ಲು ತೆರವುಗೊಳಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಶಾಕ್‌ಗೆ ಒಳಗಾಗಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ರವೀಂದ್ರ ಅವರು ಮಂಗಳೂರು ಫಾದರ್ ಮುಲ್ಲಾರ್‍ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here