ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸವಣೂರು ವಲಯದ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷೆ: ಯಶೋಧಾ ನವೀನ್ ಮೆದು ,ಕಾರ್ಯದರ್ಶಿ ಶುಭಲಕ್ಷ್ಮಿ, ಕೋಶಾಧಿಕಾರಿ ಜಯಶ್ರೀ

ಸವಣೂರು : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸವಣೂರು ವಲಯದ  2022- 2023 ನೇ ಸಾಲಿನ ಮಹಾಸಭೆಯು ಸವಣೂರು ಯುವಕ ಮಂಡಲದ ಸಭಾಭವನದಲ್ಲಿ ಜಗನ್ನಾಥ ಅಮೈ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು. ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ್ ಉರ್ಲಾಂಡಿ,ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ್ ಬಿ.ಎನ್, ಪ್ರಧಾನ ಕಾರ್ಯದರ್ಶಿ ಉಮಾನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸವಣೂರು ವಲಯದ ಕಾರ್ಯದರ್ಶಿ ಯಶೋಧ ನವೀನ್ ಮೆದು ಅವರು ಸಂಘದ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ್ ಉರ್ಲಾಂಡಿ  ಮಾಹಿತಿ ನೀಡಿದರು. ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ ಬಿ.ಎನ್  ಮಾತನಾಡಿ, 2023ರ ಸಾಲಿನ ಪುತ್ತೂರು ಕ್ಷೇತ್ರದ ವಾರ್ಷಿಕ ಮಹಾಸಭೆ ಜು.30ರಂದು ಪುತ್ತೂರು ಟೌನ್ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಲಿದ್ದು,ಈ ಸಂದರ್ಭದಲ್ಲಿ 2022-2023ನೇ ಸಾಲಿನ ಎಸ್.ಎಸ್. ಎಲ್. ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ 90% ಅಧಿಕ ಅಂಕ ಪಡೆದ ಟೈಲರ್ ವೃತ್ತಿಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಮತ್ತು ಸವಣೂರು ವಲಯದ ಹಿರಿಯ ಸದಸ್ಯರಾದ ವೆಂಕಪ್ಪ ಗೌಡ ಅವರಗೆ ಸನ್ಮಾನ ಕಾರ್ಯಕ್ರಮವಿದೆ ಎಂದರು.

ಪುತ್ತೂರು ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮಾನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸವಣೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಯಶೋಧ ನವೀನ್ ಮೆದು, ಕಾರ್ಯದರ್ಶಿ ಶುಭಲಕ್ಷ್ಮಿ, ಕೋಶಾಧಿಕಾರಿಯಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ಬೇಬಿ ಕುಮಾರಮಂಗಲ, ಜತೆ ಕಾರ್ಯದರ್ಶಿಯಾಗಿ ಸಂಧ್ಯಾ ಇಡ್ಯಾಡಿ, ಕ್ಷೇತ್ರ ಸಮಿತಿಗೆ ಜಗನ್ನಾಥ್ ಅಮೈ,ಮೋಹಿನಿ ಬಂಬಿಲ, ಕುಸುಮಾವತಿ, ಸುಜನಿ,ಜಯಂತಿ ಇವರನ್ನು ಆಯ್ಕೆ ಮಾಡಲಾಯಿತು. ಜನನಿ, ಶಾರ್ವರಿ ಮೆದು, ಎಂ.ಆಧ್ಯ, ಸಿಂಚನ ಪ್ರಾರ್ಥಿಸಿದರು. ಶುಭಲಕ್ಷ್ಮಿ ಸ್ವಾಗತಿಸಿದರು. ಮೋಹಿನಿ ಬಂಬಿಲ ಕಾರ್ಯಕ್ರಮ ನಿರೂಪಿಸಿದರು.

ಶುಭಲಕ್ಷ್ಮಿ , ಜಯಶ್ರೀ , ಯಶೋಧಾ

LEAVE A REPLY

Please enter your comment!
Please enter your name here