ಕರ್ನಾಟಕ ಟೈಲರ್ ಅಸೊಸಿಯೇಷನ್ ಕಾಣಿಯೂರು ವಲಯದ ಮಹಾಸಭೆ- ಸಮಿತಿ ರಚನೆ

0

ಅಧ್ಯಕ್ಷರಾಗಿ ಜಯಶ್ರೀ ಕಂಡೂರು, ಕಾರ್ಯದರ್ಶಿ ಭವ್ಯ ಬಲ್ಕಾಡಿ, ಕೋಶಾಧಿಕಾರಿ ಯಶವಂತ ಕೇಪುಳಗುಡ್ಡೆ

ಕಾಣಿಯೂರು: ಕರ್ನಾಟಕ ಟೈಲರ್ ಅಸೋಸಿಯೇಷನ್ ಕಾಣಿಯೂರು ವಲಯದ ಮಹಾಸಭೆಯು ವಲಯಾಧ್ಯಕ್ಷರಾದ ಅರುಣಾ ಎಂ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದಭದಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ ಮಾತನಾಡಿ, ಕರ್ನಾಟಕ ಟೈಲರ್ ಅಸೋಸಿಯೇಶನ್ ಸಂಘಟನೆಯನ್ನು ಇನ್ನೂ ಬಲಿಷ್ಠವಾಗಿ ಬೆಳೆಯಬೇಕು. ಸರಕಾರದಿಂದ ಸಿಗುವಂತಹ ಸೌಲಭ್ಯಗಳು ಸಂಘಕ್ಕೆ ಸಿಗುವ ಹಾಗೇ ಪ್ರಯತ್ನಿಸಬೇಕು ಎಂದು ಹೇಳಿದರು. ಕರ್ನಾಟಕ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್ ಮಾತನಾಡಿ, ಸ್ಕಾಲರ್‌ಶಿಪ್‌ಗೆ ಆರ್ಹ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ಷೇತ್ರ ಸಮಿತಿಗೆ ನೀಡಬೇಕು. ನೂತನ ಪದಾಧಿಕಾರಿಗಳ ಮುಖಾಂತರ ಸಂಘವನ್ನು ಬಲಪಡಿಸಬೇಕು ಎಂದರು. ಕರ್ನಾಟಕ ಟೈಲರ್ ಅಶೋಸಿಯೇಶನ್ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಯಕ್ ಉಪಸ್ಥಿತರಿದ್ದರು. ಸಂಘದ ಪರಮೇಶ್ವರ ಗೌಡ ಅನಿಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ನೂತನ ಪದಾಧಿಕಾರಿಗಳ ಆಯ್ಕೆ:
ಈ ಸಂದರ್ಭದಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್ ಕಾಣಿಯೂರು ವಲಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಶ್ರೀ ಪುರುಷೋತ್ತಮ ಕಂಡೂರು, ಕಾರ್ಯದರ್ಶಿಯಾಗಿ ಭವ್ಯ ಕೆ.ಪಿ ಬಲ್ಕಾಡಿ, ಕೋಶಾಧಿಕಾರಿಯಾಗಿ ಯಶವಂತ ಗೌಡ ಕೇಪುಳಗುಡ್ಡೆ, ಉಪಾಧ್ಯಕ್ಷರಾಗಿ ಸುರೇಖಾ ದೇವಿನಗರ, ಜತೆ ಕಾರ್ಯದರ್ಶಿಯಾಗಿ ವನಿತಾ ದೋಳ್ಪಾಡಿಯವರನ್ನು ಆಯ್ಕೆಮಾಡಲಾಯಿತು. ಹಾಗೂ ವಲಯದಿಂದ ಪುತ್ತೂರು ಕ್ಷೇತ್ರ ಸಮಿತಿಗೆ ಅರುಣಾ ಎಂ.ಶೆಟ್ಟಿ, ರಮೇಶ್ ಸುವರ್ಣ ಅಬೀರ, ರಾಧಾಕೃಷ್ಣ ರೈ ಪಟ್ಟೆ, ವನಿತಾ ಮುಗರಂಜ, ರಾಧಾ ನಡುಮನೆ ಕುದ್ಮಾರು, ಸುಮಲತಾ ದೇವಸ್ಯ, ಪರಮೇಶ್ವರ ಅನಿಲ ಇವರನ್ನು ಆಯ್ಕೆ ಮಾಡಲಾಯಿತು. ಗಂಗಾಧರ ಗೌಡ ಅಗಳಿ, ಶೀನಪ್ಪ ಗೌಡ, ರಮೇಶ್ ಸುವರ್ಣ ಅಬೀರ, ಸುಮಲತಾ, ಸುಜಾತ, ವನಿತಾ, ಸುರೇಖಾ, ನಯನ, ಅಕ್ಷತಾ, ಯಶಸ್ವಿನಿ, ಕಾವ್ಯ ಡೆಬ್ಬೆಲಿ, ಪ್ರೇಮಲತಾ, ಪ್ರೇಮ ಡೆಬ್ಬೆಲಿ, ಯಶೋದ, ಶಿವಪ್ಪ ಬಂಡಾಜೆ, ರಾಧಾಕೃಷ್ಣ ರೈ, ಜಯಂತಿ, ದಿವ್ಯ, ಉಷಾ, ಯಶೋದಾ, ಕೋಮಲಾಂಗಿ, ರೇವತಿ, ಜಯಲಕ್ಷ್ಮೀ, ಪ್ರಮೀಳಾ, ವೈಶಾಲಿ, ರಾಧಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here