ಇರ್ದೆ-ಉಪ್ಪಳಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

0

ಪುತ್ತೂರು:ಭಾರತ ಸರಕಾರದ ಡಿಪಾರ್ಟ್ ಆಫ್ ಸೈಯನ್ಸ್ ಆಂಡ್ ಟೆಕ್ನಾಲಜಿ ನ್ಯಾಷನಲ್ ಇನ್ನೋವೇಷನ್ ಫೌಂಡೇಶನ್ ಇಂಡಿಯಾ ಇವರ ಸಹಯೋಗದಲ್ಲಿ ಇನ್‌ಸ್ಪೈರ್ ಅವಾರ್ಡ್‌ಗೆ ಮಾನಕ್ ಇವರು ನಡೆಸುವ 2021-22ನೇ ಸಾಲಿನ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್‌ಗೆ ಸ್ಪರ್ಧೆಗೆ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಧಿಗಳಾದ ಅಜಿತ್ ಸಿ. ಹಾಗೂ ಅಖಿಲೇಶ್ ಆಯ್ಕೆಯಾಗಿದ್ದಾರೆ.


a  novel product from areca sheet to prevent reverberation ಎಂಬ ವಿಷಯದಲ್ಲಿ ಅಜಿತ್ ಸಿ ಯವರು ಪ್ರಾಜೆಕ್ಟ್ ತಯಾರಿಸಿದ್ದಾರೆ. ಇವರಿಗೆ ಶಾಲಾ ಗಣಿತ ಶಿಕ್ಷಕಿ ವಿದ್ಯಾಲಕ್ಷ್ಮೀ ಎ.ರವರು ಮಾರ್ಗದರ್ಶನ ನೀಡಿರುತ್ತಾರೆ. ಇವರು ಅಜಲಡ್ಕ ನಿವಾಸಿ ಚನಿಯಪ್ಪ ನಾಯ್ಕ ಮತ್ತು ಗೀತಾ ದಂಪತಿ ಪುತ್ರ.
ಅಖಿಲೇಶ್‌ರವರು, a novel product from calycopteris floribunda to repell pests  ಎಂಬ ವಿಷಯದಲ್ಲಿ ಪ್ರಾಜೆಕ್ಸ್ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವನಿಗೆ ವಿಜ್ಞಾನ ಶಿಕ್ಷಕಿ ಸವಿತಾ ಕೆ ರವರು ಮಾರ್ಗದರ್ಶನ ನೀಡಿರುತ್ತಾರೆ. ಇವರು ಉಪ್ಪಳಿಗೆ ನಿವಾಸಿ ದುಗ್ಗಪ್ಪ ಮತ್ತು ಭವಾನಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here